ಉಪೇಂದ್ರ 
ಸಿನಿಮಾ ಸುದ್ದಿ

ಫಿಟ್ನೆಸ್ ಚಾಲೆಂಜ್ ಗೆ ಉಪೇಂದ್ರ ಸಡ್ಡು; ಉಪ್ಪಿ ಪ್ರಕಾರ ಫಿಟ್ನೆಸ್ ಅಂದ್ರೆ ಏನು?

ಸೆಲೆಬ್ರಿಟಿಗಳು ಮತ್ತು ಜನಪ್ರಿಯ ವ್ಯಕ್ತಿಗಳ ಫಿಟ್ನೆಸ್ ಚಾಲೆಂಜ್ ಇತ್ತೀಚೆಗೆ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ...

ಬೆಂಗಳೂರು: ಸೆಲೆಬ್ರಿಟಿಗಳು ಮತ್ತು ಜನಪ್ರಿಯ ವ್ಯಕ್ತಿಗಳ ಫಿಟ್ನೆಸ್ ಚಾಲೆಂಜ್ ಇತ್ತೀಚೆಗೆ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಟ್ರೆಂಡಿಯಾಗಿರುವ ವಿಷಯವಾಗಿದೆ. ಖ್ಯಾತ ವ್ಯಕ್ತಿಗಳು ಜಿಮ್ ನಲ್ಲಿ ಬೆವರಿಳಿಸುವ, ಕಸರತ್ತು ಮಾಡುವ ವಿಡಿಯೊ ಮಾಡಿ ಅಪ್ ಲೋಡ್ ಮಾಡಿ ದೇಹವನ್ನು ದಂಡಿಸುವುದು ಹೇಗೆ, ಸದೃಢ ಶರೀರವನ್ನು ಕಾಪಾಡುವುದು ಹೇಗೆ ಎಂಬಿತ್ಯಾದಿಗಳ ಕುರಿತು ತೋರಿಸಿಕೊಡುತ್ತಾರೆ. ನಂತರ ತಮಗಿಷ್ಟ ಬಂದ ವ್ಯಕ್ತಿಗಳಿಗೆ ಚಾಲೆಂಜ್ ನ್ನು ರವಾನಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟಿಗ ವಿರಾಟ್ ಕೊಹ್ಲಿಯಿಂದ ಹಿಡಿದು ಅನೇಕ ಜನಪ್ರಿಯ ವ್ಯಕ್ತಿಗಳು ಈಗಾಗಲೇ ಈ ಸವಾಲನ್ನು ಸ್ವೀಕರಿಸಿ ಸದೃಢ ಕಾಯುವ ಕೆಲಸದಲ್ಲಿ ನಿರತರಾಗಿದ್ದಾರೆ.

 #HumFitToIndiaFit ಎಂಬ ಹ್ಯಾಶ್ ಟಾಗ್ ನೊಂದಿಗೆ ದೈಹಿಕ ಕಸರತ್ತು ನಡೆಸುವ ವಿಡಿಯೊವನ್ನು ಇತ್ತೀಚೆಗೆ ನಟ ಕಿಚ್ಚ ಸುದೀಪ್ ಅಪ್ ಲೋಡಿ ಮಾಡಿ ನಂತರ ಸವಾಲನ್ನು ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಕೆಲವರಿಗೆ ರವಾನಿಸಿದ್ದರು. ತಮ್ಮ ಪೈಲ್ವಾನ ಚಿತ್ರದ ಶೀರ್ಷಿಕೆಯನ್ನು ನೀಡಿ bringout phailwan in you ಎಂಬ ನೂತನ ಸವಾಲನ್ನು ಹುಟ್ಟುಹಾಕಿದ್ದರು. ಯಾವ ಕೆಲಸ ಮಾಡುವುದಿದ್ದರೂ ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಯೋಚಿಸುವ ಉಪೇಂದ್ರ ಅವರು ಕಿಚ್ಚ ಸುದೀಪ್ ಅವರ ಸವಾಲನ್ನು ಸ್ವೀಕರಿಸಿ ಕೆಲ ದಿನ ಸುಮ್ಮನಾಗಿದ್ದರು.

ನಂತರ ಒಂದು ದಿನ ಇದ್ದಕ್ಕಿದ್ದಂತೆ ಸೀದಾ ತಮ್ಮ ತೋಟಕ್ಕೆ ಹೋಗಿ ಗುದ್ದಲಿ ಹಿಡಿದು ಪಕ್ಕಾ ಹಳ್ಳಿಯ ಕೃಷಿಕನಂತೆ ಮಣ್ಣು ಅಗೆಯುವ ವಿಡಿಯೊ ಮಾಡಿ ಅಪ್ ಲೋಡ್ ಮಾಡಿದ್ದಾರೆ. ''ನನ್ನ ಪ್ರಕಾರ ಬೆಸ್ಟ್ ವರ್ಕೌಟ್ ಅಂದರೆ ಈ ತರಹ ಪ್ರಕೃತಿ ಮಡಿಲಲ್ಲಿ ಹೊಲದಲ್ಲಿ ಕೆಲಸ ಮಾಡೋದು, ಏನಂತೀರಾ ಸುದೀಪ್ ಅವರೇ'' ಎಂದು ಕೇಳಿದ್ದಾರೆ. ಇವರ ಈ ವಿಡಿಯೊ ಈಗ ವೈರಲ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ನಿಮ್ಮ ಮಾತು ಸಂಪೂರ್ಣವಾಗಿ ಒಪ್ಪುವಂತದ್ದು ಎಂದು ಹೇಳಿದ್ದಾರೆ.

ಫಿಟ್ನೆಸ್ ಚಾಲೆಂಜ್ ಸವಾಲಿನಲ್ಲಿ ಉಪೇಂದ್ರ ಅವರ ವಿಡಿಯೊ ವಿಶಿಷ್ಟವಾಗಿ ಕಾಣುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT