ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಹೊಟ್ಟೆ ಹುಣ್ಣಾಗುವಂತೆ ನಗಿಸಲು ಮತ್ತೆ ಬರುತ್ತಿದ್ದಾನೆ 'ಪಾಪಾ ಪಾಂಡು'

ದಶಕಗಳ ಹಿಂದೆ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದ ಕಿರುತೆರೆ ಬ್ಲಾಕ್ ಬಸ್ಟರ್ ಪಾಪಾ ಪಾಂಡು ಧಾರಾವಾಹಿ ಮತ್ತೆ ಹೊಸ ಅವತಾರದಲ್ಲಿ ಕಿರುತೆರೆಗೆ ಅಪ್ಪಳಿಸಲಿದೆ.

ಬೆಂಗಳೂರು: ದಶಕಗಳ ಹಿಂದೆ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದ ಕಿರುತೆರೆ ಬ್ಲಾಕ್ ಬಸ್ಟರ್ ಪಾಪಾ ಪಾಂಡು ಧಾರಾವಾಹಿ ಮತ್ತೆ ಹೊಸ ಅವತಾರದಲ್ಲಿ ಕಿರುತೆರೆಗೆ ಅಪ್ಪಳಿಸಲಿದೆ.
ಹಳೆಯ ಪಾತ್ರಗಳನ್ನೇ ಇಟ್ಟುಕೊಂಡು ಹೊಸ ಅವತಾರದ ಪಾಪಾ ಪಾಂಡು ಇದೇ ಜುಲೈ 2ರಿಂದ ಪ್ರತೀ ದಿನ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ. ಈ ಹಿಂದೆ ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಇನ್ನು ಮುಂದೆ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.
ವಿಶೇಷವೆಂದರೆ ಈ ಹೊಸ ಅವತಾರದ ಪಾಪಾ ಪಾಂಡುಗೆ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ಸಿಹಿಕಹಿ ಚಂದ್ರು ಅವರು ನಿರ್ದೇಶನ ಮಾಡುತ್ತಿದ್ದು, ಪಾಂಡು ಪಾಚ್ರದಲ್ಲಿ ಚಿದಾನಂದ್ ಹಾಗೂ ಶ್ರೀಮತಿ ಪಾತ್ರದಲ್ಲಿ ಶಾಲಿನಿ ಅಭಿನಯಿಸಿದ್ದಾರೆ. ಈ ಬಗ್ಗೆ ಸಂತಸದಿಂದಲೇ ಮಾತನಾಡಿರುವ ಚಿದಾನಂದ್, ಪಾಪಾ ಪಾಂಡು ಧಾರಾವಾಹಿಯಿಂದಲೇ ನಾನು ಚಿರಪರಿಚಿತನಾದೆ. ಈಗ ಅದೇ ಧಾರಾವಾಹಿಯಲ್ಲಿ ಅದೇ ಪಾತ್ರಕ್ಕೆ ಅವಕಾಶ ದೊರೆತಿರುವುದು ನಿಜಕ್ಕೂ ಸಂತಸ ತಂದಿದೆ. ಈ ಧಾರಾವಾಹಿಯ ತಂಡ ನನ್ನ ಕುಟುಂಬವಿದ್ದಂತೆ. ಮತ್ತೆ ನಾನು ಕುಟುಂಬ ಸೇರುತ್ತಿರುವುದಕ್ಕೆ ಸಂತಸವಾಗುತ್ತಿದೆ. ಮತ್ತೆ ಪಾಂಡು ಪಾತ್ರಧಾರಿಯಾಗಲು ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.
ಪಾಂಡು ಜೊತೆಗೆ ಕಲರ್ಸ್ ಕನ್ನಡ 7 ಹೊಸ ಕಾರ್ಯಕ್ರಮಗಳು ಪ್ರಸಾರವಾಗಲಿದ್ದು, 5 ಧಾರಾವಾಹಿಗಳು ಹಾಗೂ 2 ರಿಯಾಲಿಟಿ ಷೋಗಳು ಪ್ರಸಾರವಾಗಲಿದೆ. ಈ ಪೈಕಿ ಇವಳೇ ವೀಣಾಪಾಣಿ, ರಾಜಾ ರಾಣಿ, ಟಿಎನ್ ಸೀತಾರಾಮ್ ಅವರ ಕಮ್ ಬ್ಯಾಕ್ ಧಾರಾವಾಳಿ ಮಗಳು ಜಾನಕಿ, ಮಾಂಗಲ್ಯಂ ತಂತುನಾನೇನಾ, ಮನೆಯೇ ಮಂತ್ರಾಲಯ ಎಂಬ ಹೊಸ ಧಾರಾವಾಹಿಗಳು ಪ್ರಸಾರವಾಗಲಿದೆ. ಇದಲ್ಲದೆ ಮಜಾ ಭಾರತ ಮತ್ತು ಕನ್ನಡ ಕೋಗಿಲೆ ಎಂಬ ರಿಯಾಲಿಟಿ ಷೋಗಳೂ ಕೂಡ ಆರಂಭವಾಗಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!