ವೆಬ್ ಸರಣಿಯಲ್ಲಿ ವಿನಾಯಕ್ ಜೋಷಿ 
ಸಿನಿಮಾ ಸುದ್ದಿ

ವಿಭಿನ್ನ ಪರಿಕಲ್ಪನೆಯ ಕನ್ನಡದ ವೆಬ್ ಸರಣಿ ಜೋಶೆಲೆ

ದೃಷ್ಟಿ ದೋಷವುಳ್ಳ ವ್ಯಕ್ತಿ ಹೇಗೆ ಆಲೋಚಿಸುತ್ತಾನೆ ಅಥವಾ ಕನಸು ಕಾಣುತ್ತಾನೆ? ಇದಕ್ಕೆ ನಟ ವಿನಾಯಕ್ ...

ದೃಷ್ಟಿ ದೋಷವುಳ್ಳ ವ್ಯಕ್ತಿ ಹೇಗೆ ಆಲೋಚಿಸುತ್ತಾನೆ ಅಥವಾ ಕನಸು ಕಾಣುತ್ತಾನೆ? ಇದಕ್ಕೆ ನಟ ವಿನಾಯಕ್ ಜೋಷಿ ಉತ್ತರ ಕಂಡುಕೊಂಡಿದ್ದಾರೆ. ಹೀಗೊಂದು ವೆಬ್ ಸರಣಿಯ ನ್ನು ಕನ್ನಡದಲ್ಲಿ ತಯಾರಿಸಿದ್ದಾರೆ.ಅದರ ಹೆಸರು ಜೋಶೆಲೆ.

ನಟನಾಗಿ ನಂತರ ರೇಡಿಯೊ ಜಾಕಿಯಾದ ವಿನಾಯಕ್ ಜೋಷಿ 50 ದಿನಗಳಲ್ಲಿ 500 ಕಿಲೋ ಮೀಟರ್ ಸಂಚರಿಸಿ 20 ಜನರ ಕಥೆಗಳನ್ನು ವಿವರಿಸುತ್ತಾರೆ. ಅವರು ಶಾರೀರಿಕ ಮತ್ತು ಮಾನಸಿಕ ವಿಶೇಷಚೇತನರು. ವೆಬ್ ಸರಣಿಯಲ್ಲಿ 7 ಅಧ್ಯಾಯಗಳಿದ್ದು ಪ್ರತಿಯೊಂದು 10 ನಿಮಿಷಗಳ ಅವಧಿಯಿರುತ್ತದೆ. ದೇಶಾದ್ಯಂತ ಚಿತ್ರಿಸಲಾಗಿದೆ. ಈ ವೆಬ್ ಸರಣಿಯಲ್ಲಿ ವಿನಾಯಕ್ ಜೋಷಿ ನಟಿಸುವುದರ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಕೂಡ ಹೊತ್ತಿದ್ದಾರೆ.

ಪರಿಕಲ್ಪನೆಯಲ್ಲಿ ವೆಬ್ ಸರಣಿಯನ್ನು ಹೊಂದಿರುವ ಜೋಶೆಲೆಯ ವಿಷಯ ಪ್ರಯಾಣಕ್ಕೆ ಸಂಬಂಧಿಸಿದ್ದು. ಅದು ಸ್ವ ಪ್ರಯಾಣ. ನಾವು ಇರುವುದಕ್ಕಿಂತ ಉತ್ತಮವಾಗಿರಬೇಕೆಂದು ಜೀವನದಲ್ಲಿ ಅದಮ್ಯ ಬಯಕೆಯಿಂದ ಜೀವಿಸುತ್ತಿರುತ್ತೇವೆ. ಇಲ್ಲಿ ವ್ಯಕ್ತಿ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದು ಆತನ ಪಯಣವನ್ನು ಒಳಗೊಂಡಿರುತ್ತದೆ. ಇಲ್ಲಿ 20 ಜನರು ಆತನಿಗೆ ಜೀವನದಲ್ಲಿ ಉತ್ತಮ ವ್ಯಕ್ತಿಯಾಗಲು ಹೇಗೆ ಸಹಾಯ ಮಾಡುತ್ತಾರೆ ಎಂಬ ಕಥೆಯನ್ನು ಒಳಗೊಂಡಿದೆ. ಇಲ್ಲಿ ನಾನು 20 ಮಾನಸಿಕ ಮತ್ತು ಶಾರೀರಿಕ ವಿಕಲಾಂಗರ ಜೊತೆ ಕೆಲಸ ಮಾಡಿದ್ದೇನೆ. ಅವರು ಹೇಗೆ ನಮ್ಮ ಜೀವನಕ್ಕೆ ಸಹಾಯ ಮಾಡುತ್ತಾರೆ ಎಂಬುದನ್ನು ಕಲಿತಿದ್ದೇನೆ. ನಿಮ್ಮ ಜೀವನದಲ್ಲಿನ ಸಮಸ್ಯೆಗಳಿಗೆ ಜೋಶೆಲೆ ಪರಿಹಾರ ನೀಡುವುದಿಲ್ಲ ಆದರೆ ನಿಮ್ಮನ್ನು ಸರಿಯಾದ ಪ್ರಶ್ನೆಗಳನ್ನು ಕೇಳಲು ಬಿಡುತ್ತದೆ ಎನ್ನುತ್ತಾರೆ ವಿನಾಯಕ್ ಜೋಷಿ.

ಇದು ಮುಂದಿನ ತಿಂಗಳ ಮೊದಲ ವಾರದಿಂದ ಸರಣಿಯಾಗಿ ಜೂನ್ ವರೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. 50ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?