ನಟಿ ಸಿಂಧು ಲೋಕನಾಥ್ 
ಸಿನಿಮಾ ಸುದ್ದಿ

ನಾನಲ್ಲ, ವೃತ್ತಿಯೇ ನನ್ನನ್ನು ಹಿಂಬಾಲಿಸಿತು: ನಟಿ ಸಿಂಧೂ ಲೋಕನಾಥ್

ವೈಯಕ್ತಿಯ ಜೀವನದ ಬದ್ಧತೆಗಳು ಹಾಗೂ ಉತ್ತಮ ಚಿತ್ರ ಕಥೆಗಳು ದೊರೆಯದೇ ಇದ್ದ ಕಾರಣ ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ನಟಿ ಸಿಂಧು ಲೋಕನಾಥ್ ಅವರು ಹೀಗೊಂದಿ ದಿನ ಎಂಬ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ...

ವೈಯಕ್ತಿಕ ಜೀವನದ ಬದ್ಧತೆಗಳು ಹಾಗೂ ಉತ್ತಮ ಚಿತ್ರ ಕಥೆಗಳು ದೊರೆಯದೇ ಇದ್ದ ಕಾರಣ ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ನಟಿ ಸಿಂಧು ಲೋಕನಾಥ್ ಅವರು ಹೀಗೊಂದಿ ದಿನ ಎಂಬ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. 
ನಟಿ ಸಿಂಧು ಲೋಕನಾಥನ್ ಅವರು ನಟಿಸಿರುವ ಹೀಗೊಂದು ಚಿತ್ರವನ್ನು ವಿಕ್ರಮ ಯೋಗಾನಂತ್ ಅವರು ನಿರ್ದೇಶಿಸಿದ್ದಾರೆ. ಮಾರ್ಚ್ 30 ರಂದು ರಾಜ್ಯದಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ. 
ಚಿತ್ರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಂಧು ಅವರು, ಚಿತ್ರವು 2016ರಲ್ಲಿಯೇ ಆರಂಭಗೊಂಡಿತ್ತು. ಆದರೆ, ಬಿಡುಗಡೆ ತಡವಾಗಿದೆ. ಆದರೆ, ಚಿತ್ರಕಥೆ ಈಗಲು ತಾಜಾತನದಿಂದ ಕೂಡಿದೆ ಎಂದು ಹೇಳಿದ್ದಾರೆ. 
ಚಿತ್ರ ಕುರಿತಂತ ಒಂದು ಸಾಲಿನ ಕಥೆ ಹೇಳಿರುವ ಸಿಂಧು, ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದೆ. ನಟಿಯಾಗುವ ತನ್ನ ಕನಸಿನ ಹಿಂದೆ ಹೋಗುವ ಯುವತಿಯರ ಕುರಿತಾಗಿದೆ. ಆದರೆ, ನನ್ನ ಜೀವನದಲ್ಲಿ ಈ ರೀತಿಯಾಗಿಲ್ಲ. ವೃತ್ತಿಯೇ ನನ್ನನ್ನು ಹಿಂಬಾಲಿಸಿತು. ನಾನು ಅದನ್ನು ಆಯ್ದುಕೊಳ್ಳಲಿಲ್ಲ. ಅದೇ ನನ್ನನ್ನು ಹುಡುಕಿ ಬಂದಿತ್ತು. ಹೀಗಾಗಿ ಅದನ್ನೇ ಭವಿಷ್ಯವಾಗಿ ತೆಗೆದುಕೊಂಡೆ ಎಂದು ಹೇಳಿದ್ದಾರೆ. 
ನಟಿಯಾಗಲು ಯುವತಿಯರು ಎಷ್ಟೆಲ್ಲಾ ಕಷ್ಟಗಳನ್ನು ಪಡುತ್ತಾರೆ. ನನ್ನ ಗುರಿಯನ್ನು ನಾನು ಮುಟ್ಟುತ್ತೇನೆಯೇ ಅಥವಾ ಇಲ್ಲವೇ... ಎಂಬುದು ಚಿತ್ರ ನೋಡಿದಾಗ ತಿಳಿಯುತ್ತದೆ. ಇದು ಕೇವಲ ಒಬ್ಬ ನಟಿಯ ಕಥೆಯಷ್ಟೇ ಅಲ್ಲ. ಭವಿಷ್ಯ ಹಾಗೂ ಮದುವೆ ಕುರಿತಂತೆ ನಿರ್ಧಾರ ಕೈಗೊಳ್ಳುವ ಪ್ರತೀಯೊಬ್ಬ ಹೆಣ್ಣುಮಕ್ಕಳ ಜೀವನದಲ್ಲಿಯೂ ಆಗುತ್ತದೆ. ಮಧ್ಯಂತರ ಸಮಯದಲ್ಲಿಯೇ ನಾವು ನಿರ್ಧಾರ ಕೈಗೊಳ್ಳುವ ಸಂದರ್ಭಗಳು ಎದುರಾಗುತ್ತವೆ ಎಂದು ತಿಳಿಸಿದ್ದಾರೆ.
ನಟಿ ಸಿಂಧೂ ಅವರಿಗೆ ವಿವಾಹವಾಗಿದ್ದು, ವಿವಾಹ ಕುರಿತು ಎಲ್ಲಿಯೂ ಬಾಯ್ಬಿಟ್ಟಿರಲಿಲ್ಲ. ಈ ಬಗ್ಗೆ ಕಾರಣ ನೀಡಿರುವ ಅವರು, ವೈಯಕ್ತಿಕ ಜೀವನವನ್ನು, ವೃತ್ತಿಪರ ಜೀವನದೊಂದಿಗೆ ಮಿಶ್ರಣ ಮಾಡುವುದು ನನಗಿಷ್ಟವಿಲ್ಲ. ನನ್ನ ವೈಯಕ್ತಿಯ ಜೀವನದ ಬಗ್ಗೆ ನಾನು ಯಾವಾಗಲು ಸುರಕ್ಷಿತವಾಗಿರಲು ಬಯಸುತ್ತೇನೆ. ನನ್ನ ವೃತ್ತಿ ಕುರಿತ ಕೆಲಸಗಳನ್ನು ಮನೆಗೆ ತರುವುದಿಲ್ಲ. ನನಗೆ ಎರಡು ವಿವಿಧ ರೀತಿಯ ಪ್ರಪಂಚವಿದೆ ಎಂದಿದ್ದಾರೆ. 
ನನಗೆ ಹಿತ ಎನಿಸುವ ಚಿತ್ರಗಳಿಗೆ ನಾನು ಸಹಿ ಮಾಡುತ್ತೇನೆ. ಮದುವೆಯಾದ ಬಳಿಕ ಚಿತ್ರರಂಗ ಬಿಡುವ ಪ್ರಶ್ನೆ ಬರುವುದಿಲ್ಲ. ಮುಂದುಯೂ ಸಿನಿಮಾಗಳಲ್ಲಿ ಕೆಲಸ ಮಾಡುತ್ತೇನೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT