ಬೆಂಗಳೂರು: ನಟ ಯಶಸ್ ಸೂರ್ಯ ಅಭಿನಯದ ರಾಮಧಾನ್ಯ ಸಿನಿಮಾಗೆ ಚಾಲೆಂಜಿಂಗ್ ಸ್ಚಾರ್ ದರ್ಶನ್ ಧ್ವನಿ ನೀಡಿದ್ದಾರೆ, ಸಿನಿಮಾ ಬಗ್ಗೆ ಮಾತನಾಡಿರುವ ದರ್ಶನ್, ಸಿನಿಮಾ ಪ್ರಾರಂಭವಾಗುವಾಗ ಮತ್ತು ಅಂತ್ಯಗೊಳ್ಳುವಾಗ ಕಥೆಯ ಬಗ್ಗೆ ಮಾತನಾಡಿದ್ದಾರೆ.
ಟಿಎನ್ ನಾಗೇಶ್ ನಿರ್ದೇಶನದ ಸಿನಿಮಾದಲ್ಲಿ ಯಶಸ್ ರಾಮ, ಕನಕ ದಾಸ ಮತ್ತು ಪ್ರಸ್ತುತ ಸನ್ನಿವೇಶದ ನಾಯಕನಾಗಿ ಅಭಿನಯಿಸಿದ್ದಾರೆ,
ಯಶಸ್ ಗಾಗಿ ನಾವು ದರ್ಶನ್ ಅವರ ಧ್ವನಿಯನ್ನು ಸಿನಿಮಾದಲ್ಲಿ ಅಳವಡಿಸಿದ್ದೇವೆ, ದರ್ಶನ್ ಮತ್ತು ಯಶಸ್ ಇಬ್ಬರು ಬೆಸ್ಟ್ ಫ್ರೆಂಡ್ಸ್, ದರ್ಶನ್ ಅವರ ಹಲವು ಸಿನಿಮಾಗಳಲ್ಲಿ ಯಶಸ್ ನಟಿಸಿದ್ದಾರೆ,
ಈ ವಾರದಲ್ಲಿ ಸಿನಿಮಾದ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ, ಸೆನ್ಸಾರ್ ಬೋರ್ಡ್ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದ್ದು, ಬುಧವಾರ ಟ್ರೇಲರ್ ರಿಲೀಸ್ ಆಗಲಿದೆ ಎಂದು ನಿರ್ದೇಶಕ ನಾಗೇಶ್ ಹೇಳಿದ್ದಾರೆ,. ನಮಿಕಾ ರತ್ನಾಕರ್ ಯಶಸ್ ಗೆ ನಾಯಕಿಯಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos