ನಾಗತಿಹಳ್ಳಿ ಚಂದ್ರಶೇಖರ್ 
ಸಿನಿಮಾ ಸುದ್ದಿ

ಮತ್ತೆ 'ಅಮೆರಿಕಾ ಅಮೆರಿಕಾ'ದಂತ ಸಿನಿಮಾ: ನಾಗತಿಹಳ್ಳಿ ಚಂದ್ರಶೇಖರ್

ಅಮೆರಿಕಾ ಅಮೆರಿಕಾದಂತ ಶ್ರೇಷ್ಠ ಸಿನಿಮಾಗಳನ್ನು ನೀಡಿದ ಕನ್ನಡಿಗರ ಪ್ರೀತಿಯ ಮೇಸ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಅಂಥದ್ದೆ ಮತ್ತೊಂದು ಸಿನಿಮಾ ...

ಬೆಂಗಳೂರು: ಅಮೆರಿಕಾ ಅಮೆರಿಕಾದಂತ ಶ್ರೇಷ್ಠ ಸಿನಿಮಾಗಳನ್ನು ನೀಡಿದ ಕನ್ನಡಿಗರ ಪ್ರೀತಿಯ ಮೇಸ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಅಂಥದ್ದೆ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ.
ಬೆಂಗಳೂರು ಮತ್ತು ಇಂಗ್ಲೆಂಡ್ ನಡುವೆ ಕುರಿತ ಕಥೆ ಇದಾಗಿದ್ದು, ಗುರುನಂದನ್ ಮತ್ತು ಮಾನ್ವಿತಾ ಹರೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.
ಸಿನಿಮಾಗೆ ಇನ್ನೂ ಟೈಟಲ್ ಅಂತಿಮವಾಗಿಲ್ಲ, ಶೀಘ್ರವೇ ಅದನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ, ಅಮೆರಿಕಾ ಅಮೆರಿಕಾದಂತ ಸಿನಿಮಾವನ್ನು ಮತ್ತೆತರಲು ಯೋಜಿಸಲಾಗುತ್ತಿದೆ, ಆ ಚಿತ್ರಕ್ಕೆ ಯಾವುದೇ ಹೋಲಿಕೆಯಿಲ್ಲ, ಆದರೆ ಕತೆ ಮಾತ್ರ ಆ ಸಾಲುಗಳಂತೆ ಇರುತ್ತದೆ ಎಂದು  ಹೇಳಿರುವ ನಾಗತಿಹಳ್ಳಿ ಪರ್ಫೆಕ್ಟ್ ಶೀರ್ಷಿಕೆಗಾಗಿ ಹುಡುಕಾಟ ನಡೆಸಿದ್ದಾರೆ.
ಇಂಗ್ಲೆಂಡ್ ನಾದ್ಯಾಂತ ಸಿನಿಮಾ ಶೂಟಿಂಗ್ ನಡೆಯಲಿದ್ದು, ವೇಲ್ಸ್, ಸ್ಕಾಟ್ಲೆಂಡ್ ಮತ್ತು ಮ್ಯಾಂಚೆಸ್ಟರ್ ನಲ್ಲಿ ಶೂಟಿಂಗ್ ನಡೆಯಲಿದೆ ಎಂದು ಹೇಳಿದ್ದಾರೆ,
ನಾಗತಿಹಳ್ಳಿ ಪುತ್ರಿ ಕನಸು ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸದ್ಯ ಕೆನಡಾದಲ್ಲಿ ವಾಸಿಸುತ್ತಿರುವ ಅವರ ಪುತ್ರಿ ಲಂಡನ್ ನ ನಾಟಿಂಗ್ ಹ್ಯಾಮ್ ವಿವಿ ಹಾಗೂ ಅಮೆರಿಕಾದ ಕೊಲಂಬಿಯಾ ವಿವಿಗಳಲ್ಲಿ ವ್ಯಾಸಂಗ ಮಾಡಿದ್ದಾರೆ.ಸದ್ಯ ಬೆಂಗಳೂರಿನಲ್ಲಿರುವ ಆಕೆ ಇಲ್ಲಿಂದಲೇ ನಮಗೆ ಶೂಟಿಂಗ್ ಗೆ ಸಹಾಯ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಜುಲೈ ತಿಂಗಳ ಮೊದಲ ವಾರದಲ್ಲಿ ಶೂಟಿಂಗ್ ಮಾಡಲು ನಾಗತಿ ಹಳ್ಳಿ ನಿರ್ಧರಿಸಿದ್ದಾರೆ,  ಮೊದಲ ಭಾಗ ಇಂಗ್ಲೆಂಡ್ ನಲ್ಲಿ ನಡೆಯಲಿದೆ,  ಚಳಿಗಾಲ ಆರಂಭಕ್ಕೂ ಮುನ್ನ ಶೂಟಿಂಗ್ ಪೂರ್ಣಗೊಳಿಸಬೇಕು. ಹೊರ ದೇಶಗಳ ಚಿತ್ರವನ್ನು ಆಗಸ್ಟ್ ತಿಂಗಳ ಒಳಗೆ ಮುಗಿಸಬೇಕಾಗಿ ಅವರು ಹೇಳಿದ್ದಾರೆ.
ಇಷ್ಟಕಾಮ್ಯ ನಿರ್ಮಾಪಕ ವೈ.ಎನ್ ಶಂಕರೇಗೌಡ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ, ಜೊತೆಗೆ ನಿರ್ದೇಶಕರ ಎನ್ ಆರ್ ಐ ಸ್ನೇಹಿತರು ಕೂಡ  ಪ್ರಾಜೆಕ್ಟ್ ಗೆ ಹಣ ಹೂಡಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT