ರಾಮಧಾನ್ಯ ಚಿತ್ರದಲ್ಲಿ ಯಶಸ್ 
ಸಿನಿಮಾ ಸುದ್ದಿ

ರಾಮಧಾನ್ಯ ಮೂಲಕ ಹೊಸ ಇಮೇಜ್ ಸೃಷ್ಟಿಸುವ ಕಾತರದಲ್ಲಿ ಯಶಸ್

ಲವರ್ ಬಾಯ್ ಇಮೇಜ್ ನಿಂದ ಹೊರಬರಲು ಪ್ರಯತ್ನಿಸುತ್ತಿರುವ ಯಶಸ್ ಗೆ ರಾಮಧಾನ್ಯ...

ಲವರ್ ಬಾಯ್ ಇಮೇಜ್ ನಿಂದ ಹೊರಬರಲು ಪ್ರಯತ್ನಿಸುತ್ತಿರುವ ಯಶಸ್ ಗೆ ರಾಮಧಾನ್ಯ ಚಿತ್ರ ಒಳ್ಳೆಯ ಯಶಸ್ಸು ನೀಡಬಹುದು ಎಂಬ ವಿಶ್ವಾಸವಿದೆ. ನಾಗೇಶ್ ಪಿಎನ್ ನಿರ್ದೇಶನದ ರಾಮಧನ್ಯದಲ್ಲಿ ಐತಿಹಾಸಿಕ ಕಥೆಯಿದ್ದು ಯಶಸ್ ಇದರಲ್ಲಿ ಮೂರು ವಿಭಿನ್ನ ಗೆಟಪ್ ಗಳಲ್ಲಿ ಅಭಿನಯಿಸುತ್ತಿದ್ದಾರೆ.

ಕನಕದಾಸ ಕುರಿತ ಚಿತ್ರವಿದು. ಇಂದಿನ ಜನಾಂಗಕ್ಕೂ ಈ ಚಿತ್ರ ಪ್ರಸ್ತುತವಾಗಿದೆ. ಇದರಲ್ಲಿ ಯೋಧ ತಿಮ್ಮಪ್ಪ ನಾಯಕ ಕನಕದಾಸನಾಗಿ ಬದಲಾದ ಕಥೆಯನ್ನು ಮತ್ತು ಕೃಷ್ಣ ದೇವರಿಗೆ ಹತ್ತಿರವಾದ ಕಥೆಯನ್ನು ವಿವರಿಸಲಾಗಿದೆ. ಇನ್ನೊಂದು ರೀತಿಯಲ್ಲಿ ಕೃಷ್ಣ ದೇವರಿಗೆ ಈ ಕಥೆ ಹತ್ತಿರವಾಗಿದೆ ಎನ್ನುತ್ತಾರೆ ಯಶಸ್. ನಾಳೆ ಈ ಚಿತ್ರ ಬಿಡುಗಡೆಯಾಗುತ್ತಿದೆ.

ಈ ಪಾತ್ರಕ್ಕಾಗಿ ಅಧಿಕ ಸಿದ್ದತೆ ಬೇಕಾಯಿತಂತೆ. ಇತಿಹಾಸದ ಗೆಟಪ್ ನಲ್ಲಿ ಪಾತ್ರವಿದ್ದರೂ ಕೂಡ ಚಿತ್ರದಲ್ಲಿ ಮನರಂಜನೆಯಿದೆ. ಈ ಚಿತ್ರಕ್ಕಾಗಿ ರಾಜ್ ಕುಮಾರ್ ಅವರ ಐತಿಹಾಸಿಕ ಸಿನಿಮಾಗಳನ್ನು ನೋಡಿ ಕೆಲವು ಅಂಶಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ಅವರು ಕೂಡ ಕನಕದಾಸನ ಪಾತ್ರ ಮಾಡಿದ್ದಾರೆ. ಹಾಗಾಗಿ ತುಂಬಾ ಸಿದ್ದತೆ ಮಾಡಿಕೊಂಡೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT