ಸಿನಿಮಾ ಸುದ್ದಿ

ಅರ್ಜುನ್ ಸರ್ಜಾ ವಿರುದ್ಧ ಶೃತಿ MeToo ಆರೋಪ: ಶೃತಿ ವಿರುದ್ಧ ಕಿಡಿ, ವಿಸ್ಮಯ ಛಾಯಾಗ್ರಾಹಕ ಹೇಳಿದ್ದೇನು?

Vishwanath S
ಬೆಂಗಳೂರು: ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ವಿರುದ್ಧ ವಿಸ್ಮಯ ಚಿತ್ರದ ಛಾಯಾಗ್ರಾಹಕ ತಿರುಗಿಬಿದ್ದಿದ್ದಾರೆ. 
ಅರ್ಜುನ್ ಸರ್ಜಾ ಪರ ಬ್ಯಾಟ್ ಬೀಸಿರುವ ಛಾಯಾಗ್ರಾಹಕ ಅರವಿಂದ್ ಕೃಷ್ಣ ಚಿತ್ರದ ಶೂಟಿಂಗ್ ಸಮಯದ ವಿಚಾರ ಮಾತನಾಡಿದ್ದಾರೆ. ಅರ್ಜುನ್ ಸರ್ಜಾ ಅವರ ಕುರಿತು ಕೆಲ ಆರೋಪಗಳು ಕೇಳಿ ಬರುತ್ತಿವೆ. 
ಈ ಚಿತ್ರದ ಶೂಟಿಂಗ್ ವೇಳೆ ನಾನು ನೋಡಿದಂತೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇಡೀ ಶೂಟಿಂಗ್ ಸೆಟ್ ವೃತ್ತಿಪರವಾಗಿತ್ತು. ಜನ ತಪ್ಪಾಗಿ ಏನೇನೋ ಕಲ್ಪಿಸಿಕೊಳ್ಳೋದು ಬೇಡ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
SCROLL FOR NEXT