ಆಶಿಕಾ ರಂಗನಾಥ್ 
ಸಿನಿಮಾ ಸುದ್ದಿ

'ರಂಗ ಮಂದಿರ'ಕ್ಕೆ ಆಶಿಕಾ ರಂಗನಾಥ್ ನಾಯಕಿ

: ಶಾಹುರಾಜ್ ಶಿಂಧೆ ನಿರ್ದೇಶನದ "ರಂಗ ಮಂದಿರ" ಚಿತ್ರಕ್ಕೆ "ಚೂರಿ ಕಟ್ಟೆ" ಖ್ಯಾತಿಯ ನಿರ್ಮಾಪಕ ಪ್ರವೀಣ್ , ನಟ ಆಶು ಬೆದ್ರೆ, ಅನುಪಮಾ ಗೌಡ ಹಾಗು ಶ್ರುತಿ ಪ್ರಕಾಶ್ ಬಂಡವಾಳ ಹೂಡಿದ್ದಾರೆ.

ಬೆಂಗಳೂರು: ಶಾಹುರಾಜ್ ಶಿಂಧೆ ನಿರ್ದೇಶನದ "ರಂಗ ಮಂದಿರ" ಚಿತ್ರಕ್ಕೆ "ಚೂರಿ ಕಟ್ಟೆ" ಖ್ಯಾತಿಯ ನಿರ್ಮಾಪಕ ಪ್ರವೀಣ್ , ನಟ ಆಶು ಬೆದ್ರೆ, ಅನುಪಮಾ ಗೌಡ ಹಾಗು ಶ್ರುತಿ ಪ್ರಕಾಶ್ ಬಂಡವಾಳ ಹೂಡಿದ್ದಾರೆ.
ಇನ್ನು ಚಿತ್ರದ ನಾಯಕಿಯನ್ನಾಗಿ ಆಶಿಕಾ ರಂಗನಾಥ್ ಅವರನ್ನು ಚಿತ್ರತಂಡ ಅಂತಿಮಗೊಳಿಸಿದೆ. "ರ್ಯಾಂಬೋ  2" ನಾಯಕಿಯಾದ ಆಶಿಕಾ ತಾವು ಮುಂದಿನ ಹಂತದ ಚಿತ್ರೀಕರಣದ ವೇಳೆ ಶೂಟಿಂಗ್ ನಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.
ಇನ್ನು ಈ ಚಿತ್ರ ನಿರ್ದೇಶಕ ಶಿಂದೆ ಪಾಲಿಗೆ ಸ್ಯಾಂಡಲ್ ವುಡ್ ಗೆ ಪುನರಾಗಮನದ ಚಿತ್ರವಾಗಿದೆ. ಎಂಟು ವರ್ಷಗಳ ದೀರ್ಘಾವಧಿ ಬಳಿಕ ಅವರು ಮತ್ತೆ ನಿರ್ದೇಶಕರ ಕ್ಯಾಪ್ ಧರಿಸಿದ್ದಾರೆ.
ಚಿತ್ರದ ಪ್ರಸಕ್ತ ಸುತ್ತಿನ ಚಿತ್ರೀಕರಣವನ್ನು ಅಕ್ಟೋಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.ಜೆಸ್ಸಿ ಗಿಫ್ಟ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರಂಗಯಣ ರಘು, ತೆಲುಗು ನಟ ಸುಮನ್, ಅಚ್ಯುತ್ ಕುಮಾರ್ ಸಹ ಈ ಚಿತ್ರದ ಪ್ರಮುಖ ತಾರಾಂಗಣದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Tamil Nadu: ರಾಜ್ಯಪಾಲರಿಗೆ ಸಿಎಂ Stalin ತಿರುಗೇಟು, ವಾರ್ಷಿಕ ಭಾಷಣ ರದ್ದತಿಗೆ ಸಾಂವಿಧಾನಿಕ ತಿದ್ದುಪಡಿಗೆ ಒತ್ತಾಯ!

ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ: ರಾಷ್ಟ್ರಗೀತೆಗೆ ಸ್ಪೀಕರ್ ಅಪಮಾನ, ಭಾಷಣ ಮಾಡದೇ ಹೊರಟ ರಾಜ್ಯಪಾಲ

ಫ್ರಾನ್ಸ್ ಜೊತೆಗೂ Donald Trump ಗಲಾಟೆ; ಶೇ.200ರಷ್ಟು ಸುಂಕ ಹೇರಿಕೆ, ಖಾಸಗಿ ಮೆಸೇಜ್ ವೈರಲ್!

ಗ್ರೀನ್‌ಲ್ಯಾಂಡ್ ಯುಎಸ್ ಪ್ರಾಂತ್ಯ; 2026 ರಲ್ಲಿ ಸ್ಥಾಪನೆ: ಅಮೆರಿಕದ ನಕ್ಷೆ ಹೊಸ ನಕ್ಷೆ ಬಿಡುಗಡೆ ಮಾಡಿದ ಟ್ರಂಪ್!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾಗೌಡಗೆ ಹೈಕೋರ್ಟ್ ಶಾಕ್, 'ಎಲ್ಲರೂ ಸಮಾನರೇ..' ಮನೆ ಊಟ ರದ್ದು!

SCROLL FOR NEXT