ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

#MeToo: ಇಡೀ ಜಗತ್ತೇ ಅರ್ಜುನ್ ರತ್ತ ಬೊಟ್ಟು ಮಾಡಿದರೂ, ನಾನು ನಂಬುವುದಿಲ್ಲ: ನಟಿ ಖುಷ್ಬೂ

#MeToo ಆರೋಪಕ್ಕೆ ಸಂಬಂಧಿಸಿದಂತೆ ಇಡೀ ಜಗತ್ತೇ ಅರ್ಜುನ್ ಸರ್ಜಾರತ್ತ ಬೊಟ್ಟು ಮಾಡಿದರೂ ನಾನು ನಂಬುವುದಿಲ್ಲ ಎಂದು ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಹೇಳಿದ್ದಾರೆ.

ಚೆನ್ನೈ: #MeToo ಆರೋಪಕ್ಕೆ ಸಂಬಂಧಿಸಿದಂತೆ ಇಡೀ ಜಗತ್ತೇ ಅರ್ಜುನ್ ಸರ್ಜಾರತ್ತ ಬೊಟ್ಟು ಮಾಡಿದರೂ ನಾನು ನಂಬುವುದಿಲ್ಲ ಎಂದು ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಹೇಳಿದ್ದಾರೆ.
ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಮೀಟೂ ಆರೋಪಗಳಿಗೆ ಸಂಬಂಧಿಸಿದಂತೆ ಇಡೀ ಭಾರತೀಯ ಚಿತ್ರರಂಗವೇ ದಿಗ್ಭ್ರಾಂತಗೊಂಡಿದ್ದು, ಪರ-ವಿರೋಧ ಚರ್ಚೆಗಳು ಮುಂದುವರೆದಿವೆ. ಏತನ್ಮಧ್ಯೆ ನಟ ಅರ್ಜುನ್ ಸರ್ಜಾ ಅವರ ಬೆಂಬಲಕ್ಕೆ ನಟಿ ಖುಷ್ಬೂ ಕೂಡ ನಿಂತಿದ್ದು, ನಾನು ಅವರನ್ನು 34 ವರ್ಷಗಳಿಂದಲೂ ನೋಡಿದ್ದೇನೆ, ಇಡೀ ಜಗತ್ತೇ ಅವರ ವಿರುದ್ಧ ಬೊಟ್ಟು ಮಾಡಿ ತೋರಿಸಿದರೂ ನಾನು ನಂಬುವುದಿಲ್ಲ ಎಂದು ಖುಷ್ಬೂ ಹೇಳಿದ್ದಾರೆ.
ಈ ಬಗ್ಗೆ ವಿಡಿಯೋದಲ್ಲಿ ಹೇಳಿಕೆ ನೀಡಿರುವ ನಟಿ ಖುಷ್ಬೂ, ಅರ್ಜುನ್ ಸರ್ಜಾರನ್ನು ನಾನು 34 ವರ್ಷಗಳಿಂದಲೂ ನೋಡಿದ್ದೇನೆ. ನನ್ನ ಮೊದಲ ಚಿತ್ರದ ಹೀರೋ ಅರ್ಜುನ್. ಮೊದಲ ಬಾರಿಗೆ ನನ್ನನ್ನು ರಕ್ಷಣೆ ಮಾಡಿದ್ದ ಹೀರೋ ಅವರು. ಅವರು ಎಂದಿಗೂ ಅಸಭ್ಯವಾಗಿ ವರ್ತಿಸಿಲ್ಲ. ಸರ್ಜಾ ವಿರುದ್ಧ ಈ ರೀತಿಯ ಆರೋಪ ಕೇಳಿ ನನಗೆ ಅಚ್ಚರಿಯಾಯಿತು. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇವೆ. ಸರ್ಜಾ ಮೇಲಿನ ಆರೋಪ ಅವರ ಎರಡು ಹೆಣ್ಣು ಮಕ್ಕಳ ಮೇಲೆ ಎಂತಹ ಪರಿಣಾಮ ಬೀರಿರುತ್ತದೆ ಎಂದು ನನಗೆ ತಿಳಿದಿದೆ. ನಾನು ಗ್ಯಾರೆಂಟಿ ಕೊಡುತ್ತೇನೆ. ಅರ್ಜುನ್ ಎಂದಿಗೂ ಯಾರೊಂದಿಗೂ ಆ ರೀತಿ ನಡೆದುಕೊಂಡಿರುವುದಿಲ್ಲ. ಇಡೀ ಜಗತ್ತೇ ಅವರತ್ತ ಕೈ ತೋರಿದರೂ ನಾನು ನಂಬುವುದಿಲ್ಲ. ಅವರ ಪರ ನಾನು ಮಾತನಾಡಲಿಲ್ಲ ಅಂದ್ರೆ ನನಗೆ ಶೇಮ್ ಅಗುತ್ತದೆ. ಅವರ ಕುಟುಂಬದಂತೆಯೇ ನಾನು ಅವರನ್ನು ನಂಬುತ್ತೇನೆ. ನಾನು ನಿನ್ನ ಪರ ಇದ್ದೇನೆ ಎಂದು ನಟ ಅರ್ಜುನ್‌ ಸರ್ಜಾಗೆ ಬೆಂಬಲ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT