ನಡುವೆ ಅಂತರವಿರಲಿ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ನಡುವೆ ಅಂತರವಿರಲಿ: ಕಾಲೇಜಿನ ಯುವ ಪ್ರೇಮಿಗಳ ಕಥೆ!

ನಡುವೆ ಅಂತರವಿರಲಿ ಸಿನಿಮಾದ ಟ್ರೇಲರ್ ಅನ್ನು ಪುನೀತ್ ರಾಜ್ ಕುಮಾರ್ ಶುಕ್ರವಾರ ಬಿಡುಗಡೆ ಮಾಡಿದ್ದಾರೆ...

ಬೆಂಗಳೂರು: ನಡುವೆ ಅಂತರವಿರಲಿ ಸಿನಿಮಾದ ಟ್ರೇಲರ್ ಅನ್ನು ಪುನೀತ್ ರಾಜ್ ಕುಮಾರ್ ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಇದರ ಬೆನ್ನಲ್ಲೆ ಅಕ್ಟೋಬರ್ 5 ರಂದು ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ, ರೋಮ್ಯಾಂಟಿಕ್ ಕಥೆಯುಳ್ಳ ಸಿನಿಮಾದಲ್ಲಿ ಐಶಾನಿ ಶೆಟ್ಟಿ,  ಪ್ರಖ್ಯಾತ್ ಪರಮೇಶ್, ನಟಿಸಿದ್ದಾರೆ, ಟೀನೇಜ್ ಯುವಕ ಯವತಿಯರ  ಕೇಂದ್ರಿತ ಸಿನಿಮಾವಾಗಿದೆ,
ಹದಿಹರೆಯದ ತಲ್ಲಣಗಳ ಸುತ್ತ ಹೆಣೆದಿರುವ ಕಥೆ ಸಿನಿಮಾದಲ್ಲಿದೆ. ಲವ್‌ಸ್ಟೋರಿಯ ಸುತ್ತ ಚಿತ್ರಕಥೆ ಹೆಣೆದಿದ್ದರೂ, ಮಾಮೂಲಿಯಾಗಿ ಹೇಳಿಲ್ಲ. ಕಾಲೇಜು ಯುವ ಮನಸ್ಸುಗಳು ಭಾವೋದ್ವೇಗ, ತಲ್ಲಣಗಳನ್ನು ಚಿತ್ರಿಸಲಾಗಿದೆ,.
ಕಾಲೇಜು ಅವಧಿಯಲ್ಲಿ ಪ್ರೀತಿ ಪ್ರೇಮಕ್ಕೆ ಸಿಲುಕಿ  ನಂತರ ಹೇಗೆ ದೂರಾಗುತ್ತಾರೆ, ಎಂಬುದನ್ನು ವಿವರಿಸಲಾಗಿದೆ,  ಕಳೆದ 10 ವರ್ಷಗಳಿಂದ ಸಿನಿಮಾ ಇಂಡಸ್ಚ್ರಿಯಲ್ಲಿರುವ ರವೀಣ್ ಜೊತೆಗೆ ಮಂಜು ಮಾಂಡವ್ಯ ಕೂಡ ಸಾಥ್ ನೀಡಿದ್ದಾರೆ, 
ರವೀಣ್  ಮೊದಲ ಬಾರಿಗೆ ಕಮರ್ಷಿಯಲ್ ಸಿನಿಮಾ ಕೂಡ ಮಾಡಿದ್ದಾರೆ, ಈ ಸಿನಿಮಾದ ಶಾಕುಂತಲೇ ಸಿಕ್ಕಳು ಹಾಡಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಸಂಜಿತ್ ಹೆಗ್ಡೆ ಹಿನ್ನೆಲೆ ಗಾಯನ ನೀಡಿದ್ದಾರೆ, 
ಬೃಂದಾ ಪ್ರೊಡಕ್ಷನ್ ನಲ್ಲಿ  ನಿರ್ಮಾಣವಾಗಿರುವ ಸಿನಿಮಾದಲ್ಲಿ ಟಿನೇಜ್‌ ಹುಡುಗ ಹುಡುಗಿಯರ ಕಥೆಯ ಜತೆಗೆ ಪೋಷಕರಿಗೂ ಒಂದಷ್ಟು ಮಾಹಿತಿಯನ್ನು ಹೇಳುವ ಪ್ರಯತ್ನ ಆಗಿದೆ. ಹದಿ ಹರೆಯದ ಪ್ರೀತಿಗೆ ಎಂತಹ ಶಕ್ತಿ ಇರಲಿದೆ, ಈ ಸಂದರ್ಭದಲ್ಲಿ ಹುಡುಗ ಹುಡುಗಿ ಹೇಗಿರಬೇಕು ಎಂದು ಹೇಳಲಾಗಿದೆ. ಈ ಎಲ್ಲವನ್ನೂ ಸಿನಿಮಾದ ಶೀರ್ಷಿಕೆ ಹೇಳಲಿದೆ. 
ಅಚ್ಯುತ್‌ ಕುಮಾರ್‌, ಅರುಣಾ ಬಾಲರಾಜ್‌, ಶ್ರೀನಿವಾಸ್‌ ಪ್ರಭು, ಚಿಕ್ಕಣ್ಣ, ರಿಷಿಕಾ ಶರ್ಮಾ ಹೀಗೆ ಅನುಭವಿ ಕಲಾವಿದರು ತಾರಾಗಣದಲ್ಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT