ಸಿನಿಮಾ ಸುದ್ದಿ

'ಬ್ರಹ್ಮಚಾರಿ'ಯಾದ ಸತೀಶ್ ನೀನಾಸಂ

Sumana Upadhyaya
ಲವ್ ಇನ್ ಮಂಡ್ಯ ಸಿನಿಮಾ ನಂತರ ಸತೀಶ್ ನೀನಾಸಂ ಮತ್ತು ನಿರ್ಮಾಪಕ ಉದಯ್ ಕೆ ಮೆಹ್ತಾ ಮತ್ತೊಮ್ಮೆ ಜತೆಯಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ಚಿತ್ರಕ್ಕೆ ಬ್ರಹ್ಮಚಾರಿ ಎಂದು ಹೆಸರಿಡಲಾಗಿದೆ.
ಬಾಂಬೆ ಮಿಠಾಯಿ ಮತ್ತು ಡಬಲ್ ಎಂಜಿನ್ ಚಿತ್ರಗಳನ್ನು ನಿರ್ದೇಶಿಸಿದ್ದ ಚಂದ್ರ ಮೋಹನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಉತ್ತಮ ನಟ ಮತ್ತು ಖ್ಯಾತ ನಿರ್ಮಾಪಕರ ಚಿತ್ರವನ್ನು ನಿರ್ದೇಶಿಸುತ್ತಿರುವ ಚಂದ್ರ ಮೋಹನ್ ಅವರಿಗೆ ಸಹ ಇದು ವೃತ್ತಿಯಲ್ಲಿ ಬ್ರೇಕ್ ಕೊಡಬಹುದಾದ ಚಿತ್ರ.
SCROLL FOR NEXT