ಬೆಂಗಳೂರು: ಮಹಾಭಾರತದ ಸಂಗ್ರಾಮ ಕುರುಕ್ಷೇತ್ರದ ಕಥೆ ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ದುರ್ಯೋಧನನ ಪಾತ್ರದಲ್ಲಿ ದರ್ಶನ್ ನಟಿಸಿದ್ದಾರೆ. ದರ್ಶನ್ ಕುರುಕ್ಷೇತ್ರದ ಕುರಿತು ನೀಡಿರುವ ಹೇಳಿಕೆ ಈಗ ವೈರಲ್ ಆಗತೊಡಗಿದೆ.
ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ನಟ ದರ್ಶನ್, "ಕುರುಕ್ಷೇತ ನಡೆದಿರೋ ಕಥೆ, ಹಲವು ಆವೃತ್ತಿಗಳಿವೆ, ವಾಲ್ಮೀಕಿ ಬರೆದಿದ್ದೇ ಬೇರೆ ರೀತಿಯಲ್ಲಿದೆ" ಎಂದು ಬಾಯ್ತಪ್ಪಿ ಹೇಳಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗತೊಡಗಿದೆ.