ಚೇತನ್ ಚಂದ್ರ ಮತ್ತು ಕೃತಿಕಾ ಅಭಿನಯದ ಶಾರ್ದೂಲ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದಾರೆ. ನಿಜಕ್ಕೂ ದೆವ್ವ ಇದೆಯೇ ಅಥವಾ ಕೇವಲ ಕಲ್ಪನೆಯೇ ಎಂಬುದನ್ನು ಹುಡುಕಲು ನಿರ್ದೇಶಕರು ಸಿನಿಮಾದಲ್ಲಿ ಪ್ರಶ್ನಿಸಿದ್ದಾರೆ.
ಸತ್ವ ಮೀಡಿಯಾ ಅಡಿಯಲ್ಲಿ ಅರವಿಂದ್ ಕೌಶಿಕ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ಶಾರ್ದೂಲ. ಈಗಾಗಲೇ ಚಿತ್ರೀಕರಣವನ್ನು ಮುಗಿಸಿ ಬಿಡುಗಡೆಗೆ ಸಿದ್ದವಾಗಿದೆ,
ದಿನ ನಿತ್ಯದ ಆಗುಹೋಗುಗಳ ಕುರಿತಾಗಿ ಅರಿವಿಟ್ಟುಕೊಂಡಿರುವ ಮನುಷ್ಯ ಎದ್ದಾಗಿನಿಂದ ತಾನು ನಿರ್ವಹಿಸುವ ಪ್ರತಿ ಕೆಲಸದಲ್ಲಿಯೂ ತನ್ನದೇ ಆದ ನಿಯಂತ್ರಣವನ್ನು ಹೊಂದಿರುತ್ತಾನೆ. ಅದರ ಬಗ್ಗೆ ಯಾರಿಗೂ ಅಂತಹ ಕೌತುಕತೆಗಳೇನು ಇರಲಿಕಿಲ್ಲ.
ಆದರೆ ಹೊಸ ವಾತಾವರಣಕ್ಕೆ ಮನುಷ್ಯ ಪ್ರಯಾಣ ಬೆಳೆಸಿದಾಗ ಆತನಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ. ಪ್ರತಿ ನಿಮಿಷವೂ ಆತನಲ್ಲಿ ಹೊಸ ಹೊಸ ಅನುಭವಗಳಾಗುತ್ತದೆ. ಅಂತಹ ಸೂಕ್ಷ್ಮ ಎಳೆಯನ್ನಿಟ್ಟುಕೊಂಡು ಶಾರ್ದೂಲ ಸಿನಿಮಾವನ್ನು ತಯಾರಿಸಲಾಗಿದೆಯಂತೆ. ಈ ಚಿತ್ರಕ್ಕೆ ರವಿತೇಜಾ ಮತ್ತು ಚೇತನ್ ಚಂದ್ರ ನಾಯಕರಾಗಿದ್ದು, ಐಶ್ವರ್ಯಾ ಮತ್ತು ಕೃತಿಕಾ ರವೀಂದ್ರ ಅವರಿಗೆ ಜತೆಯಾಗಿದ್ದಾರೆ.
ಇನ್ನು ಈ ಸಿನಿಮಾವನ್ನು ಅರವಿಂದ್ ಕೌಶಿಕ್ ತಮ್ಮದೇ ಬ್ಯಾನರ್ ನಲ್ಲಿ ಸ್ನೇಹಿತ ರೋಹಿತ್ ಕಲ್ಯಾಣ್ ಸಹಭಾಗಿತ್ವದಲ್ಲಿ ನಿರ್ಮಾಣವನ್ನು ಮಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos