'ಬಾಹುಬಲಿ' ನಟನ ಪತ್ನಿ ನೇಣಿಗೆ ಶರಣು! 
ಸಿನಿಮಾ ಸುದ್ದಿ

'ಬಾಹುಬಲಿ' ನಟನ ಪತ್ನಿ ನೇಣಿಗೆ ಶರಣು!

ರಾಜಮೌಳಿ ಅವರ "ಬಾಹುಬಲಿ"ಯಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದ ಪ್ರಖ್ಯಾತ ತೆಲುಗು ಕಿರುತೆರೆ ಕಲಾವಿದ ಮಧು ಪ್ರಕಾಶ್ ಅವರ ಪತ್ನಿ ನೇಣಿಗೆ ಶರಣಾಗಿದ್ದಾರೆ.

ಹೈದರಾಬಾದ್: ರಾಜಮೌಳಿ ಅವರ "ಬಾಹುಬಲಿ"ಯಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದ ಪ್ರಖ್ಯಾತ ತೆಲುಗು ಕಿರುತೆರೆ ಕಲಾವಿದ ಮಧು ಪ್ರಕಾಶ್ ಅವರ ಪತ್ನಿ ನೇಣಿಗೆ ಶರಣಾಗಿದ್ದಾರೆ.
ಮಧು ಪ್ರಕಾಶ್ ಅವರ ಪತ್ನಿ ಭಾರತಿ ಮಂಗಳವಾರ ಹೈದರಾಬಾದ್ ನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ ಮಧು ಅವರ ಜೀವನ ಶೈಲಿ ವಿಚಾರವಾಗಿ ಗಂಡ-ಹೆಂಡತಿಯ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಅಲ್ಲದೆ ಪತಿಗೆ ಅಕ್ರಮ ಸಂಬಂಧವಿದ್ದ ಬಗ್ಗೆ ಭಾರತಿ ಶಂಕೆ ವ್ಯಕ್ತಪಡಿಸಿದ್ದರು ಎಂದೂ ಹೇಳಲಾಗಿದೆ.
2015ರಲ್ಲಿ  ಮಧು ಹಾಗೂ ಭಾರತಿ ವಿವಾಹವಾಗಿದ್ದು ಭಾರತಿ ಹೈದರಾಬಾದ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಟ ಪ್ರತಿದಿನ ತಡವಾಗಿ ಮನೆಗೆ ಬರುತ್ತಿದ್ದದ್ದು ಪತಿ-ಪತ್ನಿಯರ ಜಗಳಕ್ಕೆ ಪ್ರಮುಖ ಕಾರಣವಾಗಿತ್ತು.
ಮಂಗಳವಾರ ಸಹ ಭಾರತಿ ಪತಿಗೆ ಬೇಗ ಮನೆಗೆ ಬರುವಂತೆ ಒತ್ತಾಯಿಸಿದ್ದಾರೆ. ಬೆಳಿಗ್ಗೆ ಹತ್ತಕ್ಕೆ ಶೂಟಿಂಗ್ ಗೆ ಹೊರಟಿದ್ದ ಮಧು ರಾತ್ರಿ ಏಳರ ಸುಮಾರಿಗೆ ಜಿಮ್ ಮುಗಿಸಿಕೊಂಡು ಮನೆಗೆ ಮರಳುವಷ್ಟರಲ್ಲಿ ಭಾರತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆಗೆ ಮುನ್ನ "ತಾನು ನೇಣು ಹಾಕಿಕೊಳ್ಳುತ್ತೇನೆ" ಎಂದು ಪತಿ ಮಧು ಅವರಿಗೆ ಭಾರತಿ ಸಂದೇಶ ರವಾನಿಸಿದ್ದಾರೆ. ಆದರೆ ನಟ ತನ್ನ ಪತ್ನಿ ಮಾತಿಗೆ ಖಂಡಿಸಿ ಉತ್ತರಿಸಿದ್ದಾರೆ.
ತನಿಖೆ ಕೈಗೊಂಡಿರುವ ಪೊಲೀಸರು ಮಧು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಓಸ್ಮಾನಿಯ ಜನರಲ್‌ ಆಸ್ಪತ್ರೆಗೆ ರವಾನಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ramnath Goenka Sahithya Samman 2025: ಸಾಹಿತಿ ಚಂದ್ರಶೇಖರ ಕಂಬಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಬಳ್ಳಾರಿ ಫೈರಿಂಗ್: ಜನಾರ್ದನ ರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ!

ಗಂಡನಿಲ್ಲದಾಗ ಪ್ರೇಮಿಯನ್ನು ಕರೆಸಿಕೊಂಡ ವಿವಾಹಿತೆ ಮಾಡಿದ್ದು ಘೋರ ಕೃತ್ಯ: ಮರ್ಮಾಂಗ ಕಳೆದುಕೊಂಡು ವ್ಯಕ್ತಿ ನರಳಾಟ!

'ನೆರೆಹೊರೆಯವರು ಕೆಟ್ಟವ್ರು, ನಾವೇನ್ ಮಾಡ್ಬೇಕು ಅನ್ನೋದನ್ನ ಬೇರೆಯವ್ರು ಹೇಳೋದ್ ಬೇಡ: ಜೈಶಂಕರ್‌ ಖಡಕ್ ವಾರ್ನಿಂಗ್

ಬಳ್ಳಾರಿ: ವಾಲ್ಮೀಕಿ ಪುತ್ಥಳಿ ಅನಾವರಣ, ತಾತ್ಕಾಲಿಕ ಮುಂದೂಡಿಕೆ- ನಾಗೇಂದ್ರ

SCROLL FOR NEXT