ಗಣೇಶ್ 
ಸಿನಿಮಾ ಸುದ್ದಿ

'ಟ್ರಿಪಲ್ ರೈಡಿಂಗ್' ಗೆ ಸಿದ್ದವಾದ ಗಣೇಶ್!

ಪ್ರಸ್ತುತ ಯೋಗರಾಜ್ ಭಟ್ರ "ಗಾಳಿಪಟ ೨" ಚಿತ್ರದ ಶೂಟಿಂಗ್ ನಲ್ಲಿ ತೊಡಗಿರುವ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮುಂದಿನ ಯೋಜನೆ ಹೊರಹಾಕಿದ್ದಾರೆ.  ವಿನೋದ್ ಪ್ರಭಾಕರ್ ಅಭಿನಯದ "ರಗಡ್" ಚಿತ್ರದ ಮೂಲಕ ನಿರ್ದೇಶಕರಾಗಿರುವ ಮಹೇಶ್ ಗೌಡ ಅವರೊಂದಿಗೆ "ಮುಂಗಾರುಮಳೆ" ನಟ ಕೆಲಸ ಮಾಡಲಿದ್ದಾರಂತೆ. 

ಪ್ರಸ್ತುತ ಯೋಗರಾಜ್ ಭಟ್ರ "ಗಾಳಿಪಟ ೨" ಚಿತ್ರದ ಶೂಟಿಂಗ್ ನಲ್ಲಿ ತೊಡಗಿರುವ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮುಂದಿನ ಯೋಜನೆ ಹೊರಹಾಕಿದ್ದಾರೆ.  ವಿನೋದ್ ಪ್ರಭಾಕರ್ ಅಭಿನಯದ "ರಗಡ್" ಚಿತ್ರದ ಮೂಲಕ ನಿರ್ದೇಶಕರಾಗಿರುವ ಮಹೇಶ್ ಗೌಡ ಅವರೊಂದಿಗೆ "ಮುಂಗಾರುಮಳೆ" ನಟ ಕೆಲಸ ಮಾಡಲಿದ್ದಾರಂತೆ. ಈ ಚಿತ್ರವು ರಾಮ್‌ಗೋಪಾಲ್ ಮತ್ತು ಅರುಣ್ ಕುಮಾರ್ ಅವರ ನಿರ್ಮಾಣದಲ್ಲಿ ಬರುತ್ತಿದ್ದು ಇದೊಂದು ರೋಮ್ಯಾಂಟಿಕ್ ಕಾಮಿಡಿ ಡ್ರಾಮಾ ಆಗಿರಲಿದೆ ಎ<ದು ಹೇಳಲಾಗುತ್ತಿದೆ.

ಇನ್ನು ಚಿತ್ರಕ್ಕಾಗಿ ಆಕರ್ಷಕ ಶೀರ್ಷಿಕೆಯೊಂದನ್ನು ಅನ್ವೇಷಿಸಲಾಗಿದೆ. ಅದುವೇ "ಟ್ರಿಪಲ್ ರೈಡಿಂಗ್" ಎಂದಾಗಿದೆ. ಆದರೆ ನಿರ್ಮಾಪಕರು ಇದುವರೆಗೆ ಶೀರ್ಷಿಕೆ ಬಗ್ಗೆ ಅಧಿಕೃತ ಪ್ರಕಟಣೆ ಕೊಟ್ಟಿಲ್ಲ.ಮೂಲಗಳ ಪ್ರಕಾರ ಚಿತ್ರದಲ್ಲಿ ಮೂವರು ನಾಯಕಿಯರಿರಲಿದ್ದಾರೆ. ಸಾಧು ಕೋಕಿಲಾ, ರಂಗಾಯಣ ರಘು, ರವಿಶಂಕರ್ ಗೌಡ, ಕುರಿ ಪ್ರತಾಪ್, ಮತ್ತು ಹಿರಿಯ ನಟರಾದ ಉಮೇಶ್, ಡಿಂಗ್ರಿ ನಾಗರಾಜ್ ಅವರನ್ನೂ ಸಹ ತೆರೆ ಮೇಲೆ ತರಲು ನಿರ್ದೇಶಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಚಿತ್ರದ ಚಿತ್ರಕಥೆ ಸಂಬಂಧ ಕೆಲಸ ಮಾಡುತ್ತಿರುವ ನಿರ್ದೇಶಕರು,"ಗಾಳಿಪಟ ೨" ಚಿತ್ರದ ಶೂಟಿಂಗ್ ಮುಗಿದ ಬಳಿಕವೇ ಗಣೇಶ್ 2020 ರಲ್ಲಿ ಜನವರಿ ಅಂತ್ಯದ ವೇಳೆಗೆ ಈ ಚಿತ್ರದ ಶೂಟಿಂಗ್ ಪ್ರಾರಂಭಿಸಲಿದ್ದಾರೆ.ಆದರೆ ಉಳಿದ ನಟ ನಟಿಯರು ಇದಾಗಲೇ ಡಿಸೆಂಬರ್ 2ರಿಂದ ಶೂಟಿಂಗ್ ನಲ್ಲಿ ತೊಡಗಿದ್ದಾರೆ.ಚಿತ್ರತಂಡ ಪ್ರಸ್ತುತ ಕುದುರೆಮುಖದಲ್ಲಿ ಕ್ಯಾಂಪ್ ಹಾಕಿದ್ದು ಅಲ್ಲಿ ಅವರು ಜನವರಿ 8 ರವರೆಗೆ ಉಳಿಯುವ ಸಾಧ್ಯತೆಯಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT