ಸಿನಿಮಾ ಸುದ್ದಿ

#ಮೀಟೂ,ಜಾತಿಯತೆ ಇನ್ನಿತರ ವಿಚಾರಗಳ ಬಗ್ಗೆ ವಿಜಯ್ ಸೇತುಪತಿ ಮನದಾಳದ ಮಾತುಗಳು

Nagaraja AB
 ತಮಿಳುನಾಡು ಹಾಗೂ ಕೇರಳದಲ್ಲಿ  ಜಾತಿಯತೆಯನ್ನು ನಿರ್ಮೂಲನೆಗೊಳಿಸುವಲ್ಲಿ  ಪ್ರೇಮ ವಿವಾಹ ಪರ್ಯಾಯ ಮಾರ್ಗ ಎಂದು ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಹೇಳಿದ್ದಾರೆ.
ಮಲಯಾಳಂನ ಸಾಪ್ತಾಹಿಕವೊಂದಕ್ಕೆ ಸೇತುಪತಿ  ನೀಡಿರುವ ಸಂದರ್ಶನದಲ್ಲಿ  ತಮಿಳುನಾಡು ಹಾಗೂ ಕೇರಳ ತನ್ನ ಸ್ವಂತ ಸ್ಥಳವೆಂದು ಭಾವಿಸಿದ್ದು, ಈ ಎರಡೂ ರಾಜ್ಯಗಳ ನಡುವೆ ಯಾವುದೇ ವ್ಯತ್ಯಾಸ ಇಲ್ಲ ಎಂದಿದ್ದಾರೆ.
ಪ್ರಗತಿಪರ ಚಿಂತನೆಗಳ  ವಿರುದ್ಧ ಮಾತನಾಡುವ ಜನರನ್ನು ಸಹ ವಿಜಯ್ ಸೇತುಪತಿ ಟೀಕಿಸಿದ್ದಾರೆ. 
ಇನ್ನೂ #ಮೀಟೂ, ಹಲ್ಲೆಗಳ ವಿರುದ್ಧ ಧ್ವನಿ ಎತ್ತುವ ಪ್ರಮುಖ ಆಸ್ತ್ರವಾಗಿದೆ. ಇದರಿಂದ ಸಕಾರಾತ್ಮಕವಾದ ಬದಲಾವಣೆಯಾಗಲಿದೆ. 10 ವರ್ಷಗಳ ಹಿಂದೆ ನಡೆದಿದ್ದ ಅಪರಾಧಗಳ ಬಗ್ಗೆ ಜನರು ಮಾತನಾಡುವುದರಿಂದ ಅಪರಾಧಿಗಳು ಈಗಲೂ ಭಯಪಡುವಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
SCROLL FOR NEXT