ಸಿನಿಮಾ ಸುದ್ದಿ

ವಜ್ರಕಾಯ ನಂತರ 'ರಾಮನ ಅವತಾರ' ಚಿತ್ರದಲ್ಲಿ ಶುಭ್ರ ಅಯ್ಯಪ್ಪ!

Vishwanath S
ವಜ್ರಕಾಯ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ಶುಭ್ರ ಅಯ್ಯಪ್ಪ ಅವರು ಮೂರು ವರ್ಷಗಳ ಬಳಿಕ ರಾಮನ ಅವತಾರ ಚಿತ್ರದಲ್ಲಿ ನಟಿಸುತ್ತಿದ್ದಾರೆ. 
ಸಹೋದರರಾದ ವಿಕಾಸ್ ಮತ್ತು ವಿನಯ್ ಪಂಪಾಪತಿ ಇಬ್ಬರು ರಾಮನ ಅವತಾರ ಚಿತ್ರದ ಮೂಲಕ ಚೊಚ್ಚಲ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಗಣವಿದ್ದು ರಾಜ್ ಬಿ ಶೆಟ್ಟಿ, ರಿಶಿ ಮತ್ತು ಡ್ಯಾನಿಶ್ ಸೇಠ್ ಅಭಿನಯಿಸುತ್ತಿದ್ದಾರೆ. ನಾಯಕಿಯಾಗಿ ಪ್ರಣೀತ ಸುಭಾಶ್ ಆಯ್ಕೆಯಾಗಿದ್ದು ಇದೀಗ ಶುಭ್ರ ಅಯ್ಯಪ್ಪ ಎರಡನೇ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. 
ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ ಸಂಯೋಜಿಸುತ್ತಿದ್ದು ಅಮ್ರೆಜ್ ಸುರ್ಜಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
SCROLL FOR NEXT