ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂಬರುವ ಯಜಮಾನ ಚಿತ್ರದ ಸಾಂಗ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದರೊಂದಿಗೆ ಹೊಸ ವರ್ಷ ಆಚರಣೆ ಮಾಡಿದ್ದಾರೆ. ವಿ. ಹರಿಕೃಷ್ಣ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇದು ಕೊನೆಯ ಗೀತೆಯಾಗಿದೆ. ಸಾಂಗ್ ಚಿತ್ರೀಕರಣದ ಪೋಟೋ ಸಿಟಿ ಎಕ್ಸ್ ಪ್ರೆಸ್ ಗೆ ದೊರೆತಿದೆ. ಯಜಮಾನ ರೀತಿಯಲ್ಲಿ ಚಾಲೆಂಜಿಂಗ್ ಸ್ಟಾರ್ ಪೋಸ್ ನೀಡಿದ್ದರೆ, ಅವರ ಸುತ್ತ ನಲ್ಲೆಯರ ದಂಡೆ ನೆರೆದಿದೆ.
ಯೋಗರಾಜ್ ಭಟ್ ಬರೆದಿರುವ ಈ ಗೀತೆಗೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಮೋಹನ್ ನೃತ್ಯ ನಿರ್ದೇಶಕರಾಗಿದ್ದಾರೆ. ವಿ. ಹರಿಕೃಷ್ಣ ಇದೇ ಮೊದಲ ಬಾರಿಗೆ ಸಂಗೀತದ ಜೊತೆಗೆ ನಿರ್ದೇಶನವನ್ನು ಮಾಡುತ್ತಿದ್ದಾರೆ.
ಕುಟುಂಬದ ಅಂಶದೊಂದಿಗೆ ವಾಣಿಜ್ಯ ಮನೋರಂಜನಾತ್ಮಕ ಚಿತ್ರ ಎಂದು ಬಿಂಬಿಸಲಾಗುತ್ತಿದ್ದು, ತಾನ್ಯ ಹೊಪ್ ಜೊತೆಗೆ ರಷ್ಮಿಕಾ ಮಂದಣ್ಣ ದರ್ಶನ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧನಂಜಯ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಶೈಲಾಗ್ ನಾಗ್ ಹಾಗೂ ಬಿ. ಸುರೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚಿತ್ರದ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.ಯಜಮಾನ ಚಿತ್ರ ಎಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಶೈಲಾಜಾ ತಿಳಿಸಿದ್ದರು.
ಚಿತ್ರದಲ್ಲಿ 3ಡಿ ಜೊತೆಗೆ ವಿಎಫ್ ಎಕ್ಸ್ ಬಳಸಲಾಗಿದ್ದು, ಸೂಕ್ತ ವೇಳೆಯಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಹೇಳಿದ್ದಾರೆ.