ಸಿನಿಮಾ ಸುದ್ದಿ

#MeToo ಅಭಿಯಾನ: ನಟ ಅಲೋಕ್ ನಾಥ್'ಗೆ ಜಾಮೀನು ಮಂಜೂರು, ದೂರು ವೈಯಕ್ತಿಕ ದ್ವೇಷ ಎಂದ ನ್ಯಾಯಾಲಯ

Manjula VN
ಮುಂಬೈ: ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಬಾಲಿವುಡ್ ನಟ ಅಲೋಕ್ ನಾಥ್ ಅವರಿಗೆ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದ್ದು, ಅಲೋಕ್ ವಿರುದ್ಧ ದಾಖಲಾಗಿರುವ ದೂರು ವೈಯಕ್ತಿಕ ದ್ವೇಷದಿಂದಾಗಿದೆ ಎಂದು ಹೇಳಿದೆ. 
ಅಲೋಕ್ ನಾಥ್ ವಿರುದ್ಧ ಚಿತ್ರ ನಿರ್ಮಾಪತಿ ವಿಂತಾ ನಂದಾ ಅವರು ಕೆಲ ದಿನಗಳ ಹಿಂದೆ ಅತ್ಯಾಚಾರ ಆರೋಪ ಮಾಡಿದ್ದರು. ಪ್ರಕರಣ ಸಂಬಂಧ ಅಲೋಕ್ ನಾಥ್ ಅವರು ವಿಂತಾ ನಂದಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದರು. 
ಇದಾಗ ಅಲೋಕ್ ನಾಥ್ ಅವರಿಗೆ ಮುಂಬೈ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ವಿಂತಾ ನಂದಾ ಅವರ ದೂರು ವೈಯಕ್ತಿಕ ದ್ವೇಷದಿಂದಾಗಿದೆ ಎಂದು ಹೇಳಿದೆ. 
ಅಲೋಕ್ ನಾಥ್ ಅವರ ಪತ್ನಿ ಅಶು ಹಾಗೂ ವಿಂತಾ ನಂದಾ ಇಬ್ಬರೂ 1980ರಲ್ಲಿ ಚಂಡೀಗಢದ ಕಾಲೇಜೊಂದರಲ್ಲಿ ಸ್ನೇಹಿತೆಯರಾಗಿದ್ದರು. ಇಬ್ಬರೂ ಟಿವಿ ಧಾರಾವಾಹಿಯೊಂದರ ನಿರ್ಮಾಪಕ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಅಲೋಕ್ ನಾಥ್ ಅವರನ್ನು ಭೇಟಿಯಾದ ಬಳಿಕ ಮೂವರೂ ಸ್ನೇಹಿತರಾಗಿ ಮುಂದುವರೆರಿದ್ದರು. ಅಲೋಕ್ ನಾಥ್ ಅವರು ಅಶು ಅವರನ್ನು ಪ್ರೀತಿಸಲು ಆರಂಭಿಸಿದ್ದರು. ಬಳಿಕ ಅಶು ಅವರನ್ನು ವಿವಾಹವಾಗಿದ್ದರು. ಇದಾದ ಬಳಿಕ ಆಪ್ತ ಗೆಳೆತಿಯನ್ನು ಕಳೆದುಕೊಂಡ ವಿಂತಾ ನಂದ ಅವರಿಗೆ ಏಕಾಂತ ಭಾವನೆ ಮೂಡಿತ್ತು. ಇದರಿಂದ ಅಲೋಕ್ ನಾಥ್ ಅವರ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ವಿಂತಾ ನಂದಾ ಅವರು ಇದೇ ದ್ವೇಷದಿಂದಲೇ ದೂರು ದಾಖಲಿಸಿದ್ದಾರೆಂದು ನ್ಯಾಯಾಲಯ ತಿಳಿಸಿದೆ. 
SCROLL FOR NEXT