ಸಿನಿಮಾ ಸುದ್ದಿ

ಮಕರ ಸಂಕ್ರಾಂತಿಗೆ ಯಜಮಾನ ಚಿತ್ರದ 'ಇಂಟ್ರೊ ಗೀತೆ ' ಬಿಡುಗಡೆ

Nagaraja AB

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ. ಮಕರ ಸಂಕ್ರಾಂತಿ ಅಂದರೆ  ಜನವರಿ 15 ರಂದು ಯಜಮಾನ ಚಿತ್ರದ ಮೊದಲ ಗೀತೆ ಬಿಡುಗಡೆಯಾಗಲಿದೆ. ನಾಯಕನನ್ನು ಪರಿಚಯಿಸುವ ಇಂಟ್ರೊಡಕ್ಷನ್ ಗೀತೆಯನ್ನು ಶಿವನಂದಿ  ಶೀರ್ಷಿಕೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಚಿತ್ರದ ನಿರ್ಮಾಪಕ ಶೈಲಾಜ ನಾಗ್ ಹೇಳಿದ್ದಾರೆ.

ನಿರ್ದೇಶಕ ಚೇತನ್ ಕುಮಾರ್ ಬರೆದಿರುವ ಈ ಹಾಡಿಗೆ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ದರ್ಶನ್ ಹಾಗೂ ಹರಿಕೃಷ್ಣ ಜಂಟಿಯಾಗಿ ಮಾಡಿರುವ 25 ಗೀತೆಯಾಗಿರುವುದು ಮತ್ತೊಂದು ವಿಶೇಷವಾಗಿದೆ.

ಮೀಡಿಯಾ ಹೌಸ್ ಸ್ಟೂಡಿಯೋ ಅಡಿಯಲ್ಲಿ ನಿರ್ಮಾಣವಾಗುತ್ತಿರುವ  ಯಜಮಾನ ಚಿತ್ರದಲ್ಲಿ ದರ್ಶನ್​ಗೆ ನಾಯಕಿಯರಾಗಿ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್ ನಟಿಸಿದ್ದಾರೆ. ‘ಡಾಲಿ’ ಧನಂಜಯ ವಿಶೇಷ ಪಾತ್ರದಲ್ಲಿದ್ದಾರೆ .ಅನೂಪ್ ಠಾಕೂರ್ ಸಿಂಗ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಾಯಕನನ್ನು ಪರಿಚಯಿಸುವ ಇಂಟ್ರಡಕ್ಷನ್ ಗೀತೆಯಲ್ಲಿ ದರ್ಶನ್ ಹೇಗೆ ಕಾಣಿಸಿಕೊಂಡಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

SCROLL FOR NEXT