ಕಡ್ಡಿಪುಡಿ ಚಂದ್ರು ನಿರ್ಮಾಣದ ಜುಗಾರಿ ಕ್ರಾಸ್ ಸಿನಿಮಾವನ್ನು ಟಿ.ಎಸ್ ನಾಗಾಭರಣ ನಿರ್ದೇಶಿಸುತ್ತಿದ್ದಾರೆ, ಪ್ರಸಿದ್ದ ಬರಹಗಾರರಾದ ಪೂರ್ಣ ಚಂದ್ರ ತೇಜಸ್ವಿ ಅವರ ಕಾದಂಬರಿ ಆಧಾರಿತ ಸಿನಿಮಾ ಇದಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಗಿದ್ದು, ಕಲಾವಿದರು ಫೈನಲ್ ಆಗಿದ್ದಾರೆ,
ಚಿತ್ರದ ಪ್ರಧಾನ ಪಾತ್ರದಲ್ಲಿ ಚಿರಂಜೀವಿ ಸರ್ಜಾ ನಟಿಸಲಿದ್ದಾರೆ, ಶೀಘ್ರವೇ ಸಿನಿಮಾ ತಂಡ ಅಧಿಕೃತವಾಗಿ ಪ್ರಕಟಿಸಲಿದೆ, ಫೆಬ್ರವರಿ ತಿಂಗಳಿನಲ್ಲಿ ಚಿತ್ರದ ಮೂಹೂರ್ತ ನೆರವೇರಲಿದೆ,
ಕೂಡ್ಲು ರಾಮಕೃಷ್ಣ ಸೇರಿದಂತೆ ಹಲವು ಪ್ರಸಿದ್ದ ನಿರ್ದೇಶಕರು ಜುಗಾರಿ ಕ್ರಾಸ್ ಕಾದಂಬರಿಯನ್ನು ಸಿನಿಮಾವಾಗಿ ತೆರೆ ಮೇಲೆ ತರಲು ಪ್ರಯತ್ನ ನಡೆಸಿದರು, ಆದರೆ ಟಿ,ಎಸ್ ನಾಗಾಭರಣ ಅವರ ಪ್ರಯತ್ನ ಮಾತ್ರ ಫಲಿಸಿದೆ, ತೇಜಸ್ವಿ ಪತ್ನಿ, ರಾಜೇಶ್ವರಿ ಅವರಿಂದ ಪುಸ್ತಕದ ಹಕ್ಕು ಪಡೆಯಲು ನಾಗಾಭರಣ ಯಶಸ್ವಿಯಾಗಿದ್ದಾರೆ.
ವಿಜಯ್ ಕಿರಣ್ ಅವರ ಸಿಂಗ ಸಿನಿಮಾದಲ್ಲಿ ಚಿರಂಜೀವಿ ನಟಿಸುತ್ತಿದ್ದು, ಜುಗಾರಿ ಕ್ರಾಸ್ ನಲ್ಲಿ ರಂಗಾಯಣ ರಘು, ತಾರಾ, ಸಾಧು ಕೋಕಿಲಾ ಸೇರಿದಂತೆ ಹಲವರು ನಟಿಸಿದ್ದಾರೆ.
ರಾಷ್ಟ್ರೀಯ. ಮತ್ತು ರಾಜ್ಯ ಪ್ರಶಸ್ತಿ ಪಡೆದಿರುವ ನಿರ್ದೇಶಕ ನಾಗಾಭರಣ ಅವರ ಸಿನಿಮಾದಿಂದ ಅವರ ಅಭಿಮಾನಿಗಳು ಹೊಸತೊಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos