ರೂಪಾ ರಾಯಪ್ಪ 
ಸಿನಿಮಾ ಸುದ್ದಿ

ಕೆಜಿಎಫ್ ನಂತರ ನನಗೆ ಹೆಚ್ಚೆಚ್ಚು ಅವಕಾಶಗಳು ಬರುತ್ತಿವೆ: ರೂಪಾ ರಾಯಪ್ಪ

ಒಂದು ಸಿನಿಮಾ ಗೆದ್ದರೆ, ಆ ಸಿನಿಮಾದ ಮೂಲಕ ಅನೇಕರು ಹುಟ್ಟುತ್ತಾರೆ. ಒಂದು ಯಶಸ್ವಿ ಸಿನಿಮಾದಲ್ಲಿ ಕೆಲಸ ಮಾಡಿದ ಸಾಕಷ್ಟು ಕಲಾವಿದ, ತಂತ್ರಜ್ಞರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. .

ಒಂದು ಸಿನಿಮಾ ಗೆದ್ದರೆ, ಆ ಸಿನಿಮಾದ ಮೂಲಕ ಅನೇಕರು ಹುಟ್ಟುತ್ತಾರೆ. ಒಂದು ಯಶಸ್ವಿ ಸಿನಿಮಾದಲ್ಲಿ ಕೆಲಸ ಮಾಡಿದ ಸಾಕಷ್ಟು ಕಲಾವಿದ, ತಂತ್ರಜ್ಞರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ಈಗ 'ಕೆಜಿಎಫ್' ಸಿನಿಮಾ ಕೂಡ ಆ ರೀತಿಯ ಜಾದುವನ್ನು ಮಾಡಿದೆ.
ಕೆಜಿಎಫ್' ಸಿನಿಮಾದ ಸೆಕೆಂಡ್ ಹಾಫ್ ನಲ್ಲಿ ಬರುವ ಗರ್ಭಿಣಿಯ ಸನ್ನಿವೇಶ ಎಲ್ಲರಿಗೂ ಕಣ್ಣೀರು ಬರುವಂತೆ ಮಾಡಿದೆ. ಸಿನಿಮಾದ ಭಾವನಾತ್ಮಕ ದೃಶ್ಯಗಳಲ್ಲಿ ಇದು ಒಂದಾಗಿದೆ. ಅಂದಹಾಗೆ, ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಟಿ ರೂಪಾ ರಾಯಪ್ಪ.
ಈ ಹಿಂದೆ ಸಣ್ಣಪುಟ್ಟ ಪಾತ್ರಗಳಿಗಾಗಿ ರೂಪ ಕಷ್ಟ ಪಡಬೇಕಿತ್ತು, ಕೆಜಿಎಫ್ ನಂತರ ನನ್ನನ್ನು ಹಲವು ಮಂದಿ ಗುರುತಿಸಿದ್ದಾರೆ, ನನಗೆ ಹಲವು ಆಫರ್ ಗಳು ಬರುತ್ತಿವೆ, ನಾನು ಕೆಜಿಎಫ್ ನಲ್ಲಿ ನಟಿಸಿದ್ದೇನೆ ಎಂದರೇ ನನ್ನನ್ನು ಗಂಭೀರವಾಗಿ ಪರಿಗಣಿಸುತ್ತಾರೆ  ಕೆಜಿಎಫ್ ನಿಂದಾಗಿ ನನ್ನನ್ನು ಎಲ್ಲರೂ ಗುರುತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಹಲವು ಅವಕಾಶಗಳು ಬಂದರೂ ತಮ್ಮ ಮುಂದಿನ ಸಿನಿಮಾ ಬಗ್ಗೆ ರೂಪಾ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ, ಕೆಜಿಎಫ್ ಜೊತೆಗೆ ಧನಂಜಯ್ ರಂಜನ್ ಅವರ ಮೈಸೂರು ಡೈರೀಸ್ ನಲ್ಲಿ ರೂಪಾ ನಟಿಸಿದ್ದಾರೆ, ಈಗಾಗಲೇ ಸಿನಿಮಾ ಟ್ರೇಲರ್ ರಿಲೀಸ್ ಆಗಿದ್ದು ಸಿನಿಮಾ ರಿಲೀಸ್ ಆಗಬೇಕಿದೆ, 
ಚಿತ್ರದ ಬಗ್ಗೆ ವಿವರಿಸಿದ ಅವರು ''ನನ್ನ ದೃಶ್ಯವನ್ನ ಚಿತ್ರಮಂದಿರದಲ್ಲಿ ನೋಡುವಾಗ ತುಂಬ ಎಮೋಷನಲ್ ಆದೆ. ಅಳು ತಡೆಯಲು ಆಗಲಿಲ್ಲ. ಫ್ರೆಂಡ್ಸ್ ಜೊತೆಗೆ ಸಿನಿಮಾ ನೋಡಿದೆ. ಇದೆಲ್ಲ ನನಗೆ ತುಂಬ ಖುಷಿ ಕೊಟ್ಟಿದೆ. 'ಕೆಜಿಎಫ್' ನಲ್ಲಿ ಡಿ ಗ್ಲಾಮರ್ ಪಾತ್ರ ಮಾಡಿದ್ದೇನೆ. ಆ ಪಾತ್ರ ಮಾಡಿರುವುದು ನಾನೇ ಎಂದು ಕಂಡು ಹಿಡಿಯಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ. 'ಕೆಜಿಎಫ್' ಪಾರ್ಟ್ 2 ನಲ್ಲಿಯೂ ನನ್ನ ಪಾತ್ರ ಮುಂದುವರೆಯಲಿದೆ.'' ಎಂದು ತಮ್ಮ ಸಂತಸ ಹಂಚಿಕೊಂಡರು.
ದೆ ರೂಪಾಗೆ ಒಳ್ಳೆಯ ಪಾತ್ರಗಳು ಹಾಗೂ ಒಳ್ಳೆಯ ಸಿನಿಮಾಗಳನ್ನು ಮಾಡುವ ಆಸೆ ಇದೆಯಂತೆ. ಪಾತ್ರಕ್ಕೆ ಮಹತ್ವ ಇರುವ ಚಿತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರಂತೆ. ಗ್ಲಾಮರ್ ಇರುವ ಪಾತ್ರಗಳಲ್ಲಿಯೂ ನಟಿಸುಲು ಸಿದ್ಧ ಎಂದು ಗಟ್ಟಿಯಾಗಿ ಹೇಳುತ್ತಿದ್ದಾರೆ. ಜೊತೆಗೆ ಪ್ರಮುಖವಾಗಿ ಲೀಡ್ ಪಾತ್ರಗಳಲ್ಲಿ ನಟಿಸಲು ಕಾಯುತ್ತಿದ್ದಾರಂತೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ಬಾರಿ ಫೆ.1ರ ಭಾನುವಾರ ಕೇಂದ್ರ ಬಜೆಟ್, ಜ. 29ಕ್ಕೆ ಆರ್ಥಿಕ ಸಮೀಕ್ಷೆ ಮಂಡನೆ!

'ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ವ್ಯಾಪಾರ ಒಪ್ಪಂದ ಹಳ್ಳ ಹಿಡಿದಿದೆ': ಲುಟ್ನಿಕ್ ಹೇಳಿಕೆ ತಳ್ಳಿಹಾಕಿದ MEA, ಹೇಳಿದ್ದೇನು?

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಪದೇ ಪದೇ ದಾಳಿ: ಭಾರತ ಹೇಳಿದ್ದೇನು?

ದ್ವೇಷ ಭಾಷಣ ಬಿಟ್ಟು 19 ವಿಧೇಯಕಗಳಿಗೆ ರಾಜ್ಯಪಾಲರ ಅಂಕಿತ; ಎರಡು ಮಸೂದೆ ವಾಪಸ್

ಕಾವೇರಿ ನದಿ ಸಂರಕ್ಷಣೆಗೆ ಹಣ ಮೀಸಲಿಡಿ: ಕೇಂದ್ರ ಸಚಿವರಿಗೆ ಸಂಸದ ಯದುವೀರ್ ಒಡೆಯರ್ ಪತ್ರ!

SCROLL FOR NEXT