ಸಿನಿಮಾ ಸುದ್ದಿ

ಯಜಮಾನ ಚಿತ್ರದ ನನ್ನ ಪಾತ್ರದ ಹೆಸರಿಗೆ ನನಗೂ ಭಾವನಾತ್ಮಕ ನಂಟಿದೆ: ರಶ್ಮಿಕಾ ಮಂದಣ್ಣ

Vishwanath S
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟು ಸಾಕಷ್ಟು ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ರಶ್ಮಿಕಾ ಮಂದಣ್ಣ ಇದೀಗ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ. 
ಯಜಮಾನ ಚಿತ್ರದಲ್ಲಿ ರಶ್ಮಿಕಾ ಪಾತ್ರದ ಹೆಸರು ಕಾವೇರಿ. ಕಾವೇರಿ ಹುಟ್ಟುವುದು ಕೊಡಗಿನಲ್ಲಿ. ಇನ್ನು ನಾನು ಮೂಲತಃ ಕೊಡಗಿನವಳು. ನನಗೆ ಆ ಹೆಸರಿಗೂ ಭಾವನಾತ್ಮಕ ಸಂಬಂಧವಿದೆ ಎಂದರು. ಕಾವೇರಿ ಹೆಸರನ್ನು ಕೇಳುತ್ತಲೆ ರಾಜ್ಯದ ಜನತೆಯ ಮನದಲ್ಲಿ ಒಂದು ರೀತಿಯ ಆತ್ಮೀಯ ಭಾವನೆ ಮೂಡುತ್ತದೆ. ಅದೇ ರೀತಿ ನನಗೂ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. 
ಕಳೆದ ಶನಿವಾರ ಯಜಮಾನ ಚಿತ್ರದ ಎರಡನೇ ವಿಡಿಯೋ ಲಿರಿಕ್ ಹಾಡು ಒಂದು ಮುಂಜಾನೆ ಬಿಡುಗಡೆಯಾಗಿತ್ತು. ಹಾಡಿನಲ್ಲಿ ಕಾವೇರಿ ಕಾಯೋ ಕೆಲಸ, ಮದುವೆನೂ ಇಲ್ಲ ದಿವಸ ಎಂಬ ಸಾಲುಗಳಿವೆ. ಈ ಹಾಡನ್ನು ಸೋನು ನಿಗಮ್ ಹಾಗೂ ಶ್ರೇಯಾ ಘೋಶಾಲ್ ಹಾಡಿದ್ದಾರೆ. 
ಚಿತ್ರವನ್ನು ಶೈಲಜಾ ನಾಗ್ ನಿರ್ಮಿಸುತ್ತಿದ್ದು ಪಿ ಕುಮಾರ್ ಎಂಬುವರು ನಿರ್ದೇಶಿಸುತ್ತಿದ್ದಾರೆ.
SCROLL FOR NEXT