ಅನುಕ್ತ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಜನರು ರಂಗಿತರಂಗ ಜೊತೆ ಅನುಕ್ತಾ ಸಿನಿಮಾ ಹೋಲಿಸುತ್ತಿದ್ದಾರೆ: ಅಶ್ವತ್ಥ್ ಸ್ಯಾಮ್ಯುಯೆಲ್

ಹೊಸಬರ ಅನುಕ್ತ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಕಥಾಹಂದರದ ಚಿತ್ರ ಒಂದೆಡೆ...

ಹೊಸಬರ ಅನುಕ್ತ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಕಥಾಹಂದರದ ಚಿತ್ರ ಒಂದೆಡೆ ದೈವಾರಾಧನೆ ಮತ್ತೊಂದೆಡೆ ಮರ್ಡರ್ ಮಿಸ್ಟರಿ ಅವೆರಡನ್ನು ಹೊಂದಿಸಿ ಹೊಸದೊಂದು ಕತೆ ಹೇಳ ಹೊರಟಿರುವ ಚಿತ್ರವೇ ಅನುಕ್ತ. 
ರಂಗಿತರಂಗ ಹಾಗೂ ಉಳಿದವರು ಕಂಡಂತೆ ಚಿತ್ರಗಳಂತೆ ಅನುಕ್ತ ಚಿತ್ರದ ಟ್ರೈಲರ್ ಕಾಣಿಸಿಕೊಂಡರು. ಇದು ರೋಚಕವಾದ ಮತ್ತೊಂದು ಕತೆ ಹೇಳಲು ಹೊರಟಿದೆ. ಅನುಕ್ತ ಎಂಬ ಶೀರ್ಷಿಕೆಗೆ  ಸಂಸ್ಕೃತದಲ್ಲಿ ‘ಹೇಳಲಾಗದ ಸಂಗತಿ’ ಎಂಬ ಅರ್ಥ ಇದೆ. ಮಂಗಳೂರು ಸಂಸ್ಕೃತಿ ಸಾರುವ ದೈವ ಕೋಲ ಇದರಲ್ಲಿದೆ,
ಅನುಕ್ತ ಡಬಲ್ ಮರ್ಡರ್ ಸ್ಟೋರಿ,  ಕಥೆ ನನ್ನ ಸ್ನೇಹಿತ ಬರೆದಿದ್ದು, ಇದೊಂದು ಹಾರರ್ ಸಿನಿಮಾವಾಗಿದೆ ಎಂದು ಹೇಳಿದ್ದಾರೆ.
ಇದರಲ್ಲಿ ನನ್ನ ತಂದೆ ಕೂಡ ಕಥೆ ಬರೆದಿದ್ದಾರೆ, ನನ್ನ ತಾಯಿ ರಂಗಭೂಮಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು.ದುಬೈನ ಹಲವು ಕ್ರೈಮ್ ಸರಣಿ ಮತ್ತು ಸಿಐಡಿ ಮತ್ತು ಭಯಾನಕ ಸರಣಿಗಳಲ್ಲಿ ಕೆಲಸ ಮಾಡಿದ್ದರು, ನಾನು ಮಂಗಳೂರಿನವನು, ನನಗೆ ಸಿನಿಮಾ ಮಾಡುವಲ್ಲಿ ಆಸಕ್ತಿ ಇತ್ತು, ನಿರ್ಮಾಪರ ಹರೀಶ್ ಬಂಗೇರಾ ಕೂಡ ಕರಾವಳಿ ಭಾಗದವರು ಎಂದು ಅಶ್ವಥ್ ಸ್ಯಾಮ್ಯುಯೆಲ್ ಹೇಳಿದ್ದಾರೆ.
ಸಿನಿಮಾದಲ್ಲಿ ಸಂಪತ್ ಕುಮಾರ್, ಅನು ಪ್ರಭಾಕರ್, ಸಂಗೀತಾ ಭಟ್, ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ, ತಾಂತ್ರಿಕವಾಗಿ ಇದೊಂದು ದೊಡ್ಡ ಸವಾಲಾಗಿದೆ, ಆದರೆ ಸಿನಿಮಾವನ್ನು ಥಿಯೇಟರ್ ಗೆ ತೆಗೆದುಕೊಂಡು ಹೋಗುವುದು ಬಹಳ ಕಷ್ಟದ ಕೆಲಸ,  ಇನ್ನೂ 28 ದಿನಗಳಲ್ಲಿ ಸಿನಿಮಾ ಶೂಟಿಂಗ್ ಪೂರ್ಣಗೊಳ್ಳಲಿದೆ, ಇದು ನನಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಸಹಾಯ ಮಾಡಲಿದೆ. ಮತ್ತು  ನನ್ನ ಮುಂದಿನ ಸಿನಿಮಾಗೆ ಇದು ಸಹಾಯ ಮಾಡಲಿದೆ ಎಂದು ಅಶ್ವಥ್ ತಿಳಿಸಿದ್ದಾರೆ. 
ಥ್ರಿಲ್ಲರ್ ಸಿನಿಮಾವಾದ ಅನುಕ್ತ ಕೌಟುಂಬಿಕ ಮನರಂಜನಾ ಸಿನಿಮಾವಾಗಿದೆ, ಇದು  ಹೊಸ ತಲೆಮಾರಿನ ಸಿನಿಮಾವಾಗಿದೆ.,ಅನುಪ್ ಭಂಡಾರಿ ಅವರ ರಂಗಿತರಂಗ ಸಿನಿಮಾ ಜೊತೆ ಜನ ಅನುಕ್ತ ಸಿನಿಮಾವನ್ನು ಹೋಲಿಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT