ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಮೆಟ್ರೊದಲ್ಲಿ ಜೀವನ ಹುಡುಕ ಹೊರಟ ಐಶಾನಿ ಶೆಟ್ಟಿ

ನಟಿ ಐಶಾನಿ ಶೆಟ್ಟಿ ಪಾತ್ರಗಳನ್ನು ಆಯ್ಕೆ ಮಾಡುವ ವಿಧಾನದಲ್ಲಿ ಬದಲಾಗಿದ್ದಾರೆ. ಅವರ ಇತ್ತೀಚಿನ ನಡುವೆ ...

ನಟಿ ಐಶಾನಿ ಶೆಟ್ಟಿ ಪಾತ್ರಗಳನ್ನು ಆಯ್ಕೆ ಮಾಡುವ ವಿಧಾನದಲ್ಲಿ ಬದಲಾಗಿದ್ದಾರೆ. ಅವರ ಇತ್ತೀಚಿನ ನಡುವೆ ಅಂತರವಿರಲಿ ಚಿತ್ರದಲ್ಲಿ ಶಾಕುಂತಲೆ ಸಿಕ್ಕಳು ಹಾಡು ಹಿಟ್ ಆಗಿತ್ತು. ಇದೀಗ ಮುಂದಿನ ಚಿತ್ರ ನಮ್ ಗಣಿ ಬಿ.ಕಾಂ ಪಾಸ್ ಒಪ್ಪಿಕೊಂಡಿದ್ದು ಅದನ್ನು ಅಭಿಷೇಕ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ ಮತ್ತು ಅವರೇ ನಾಯಕ ಕೂಡ.

ಕಿರು ಚಿತ್ರಗಳ ನಿರ್ದೇಶನ ಮೂಲಕ ಅನುಭವ ಗಳಿಸಿರುವ ಅಭಿಷೇಕ್ ಗಿದು ಬೆಳ್ಳಿತೆರೆಯಲ್ಲಿ ಮೊದಲ ಪ್ರಯೋಗ. ಮೆಟ್ರೊ ನಗರದಲ್ಲಿನ ಜೀವನ, ಇಲ್ಲಿ ಯುವಜನತೆ ಎದುರಿಸುವ ಸವಾಲುಗಳನ್ನು ಒಳಗೊಂಡ ಕಥೆಯಾಗಿರುತ್ತದೆ. ಅದನ್ನು ವಿನೋದ ರೀತಿಯಲ್ಲಿ ವಿವರಿಸಲಾಗಿದೆ. ಚಿತ್ರದ ಮೊದಲ ಶೆಡ್ಯೂಲ್ ಮುಗಿದಿದ್ದು ಎರಡನೇ ಭಾಗ ಫೆಬ್ರವರಿ ಮೊದಲ ವಾರದಲ್ಲಿ ಆರಂಭವಾಗಲಿದೆ ಎಂದರು ಐಶಾನಿ.

ಚಿತ್ರದಲ್ಲಿ ಎರಡು ರೀತಿಯಲ್ಲಿ ಐಶಾನಿ ಕಾಣಿಸಿಕೊಳ್ಳಲಿದ್ದಾರೆ. ಮೊದಲಿಗೆ ಶಾಲೆಯ ಹುಡುಗಿಯಾಗಿ ಮತ್ತು ನಂತರ ದೊಡ್ಡ ಹುಡುಗಿಯಾಗಿ. ನನ್ನ ಪಾತ್ರ ನಾಯಕನ ಜೀವನದಲ್ಲಿ ಬದಲಾವಣೆ ತರುತ್ತದೆ. ಒಂದು ಚಿತ್ರದಲ್ಲಿ ಎರಡು ಪಾತ್ರಗಳನ್ನು ನಿಭಾಯಿಸುವುದು ಖುಷಿ ಕೊಡುತ್ತದೆ ಎನ್ನುತ್ತಾರೆ.

ಬೃಂದಾವನ ಎಂಟರ್ ಪ್ರೈಸಸ್ ನಡಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಸುಧಾ ಬೆಳವಾಡಿ ಮತ್ತು ಜಹಂಗೀರ್ ಕೂಡ ನಟಿಸುತ್ತಿದ್ದಾರೆ. ವಿಕಾಸ್ ವಶಿಷ್ಟ ಅವರ ಸಂಗೀತವಿದೆ. ಹಿನ್ನಲೆ ಸಂಗೀತ ನೊಬಿಲ್ ಪೌಲ್ ಮತ್ತು ಛಾಯಾಗ್ರಹಣ ನಾಗರಾಜ್ ಅವರದ್ದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT