ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಮೆಟ್ರೊದಲ್ಲಿ ಜೀವನ ಹುಡುಕ ಹೊರಟ ಐಶಾನಿ ಶೆಟ್ಟಿ

ನಟಿ ಐಶಾನಿ ಶೆಟ್ಟಿ ಪಾತ್ರಗಳನ್ನು ಆಯ್ಕೆ ಮಾಡುವ ವಿಧಾನದಲ್ಲಿ ಬದಲಾಗಿದ್ದಾರೆ. ಅವರ ಇತ್ತೀಚಿನ ನಡುವೆ ...

ನಟಿ ಐಶಾನಿ ಶೆಟ್ಟಿ ಪಾತ್ರಗಳನ್ನು ಆಯ್ಕೆ ಮಾಡುವ ವಿಧಾನದಲ್ಲಿ ಬದಲಾಗಿದ್ದಾರೆ. ಅವರ ಇತ್ತೀಚಿನ ನಡುವೆ ಅಂತರವಿರಲಿ ಚಿತ್ರದಲ್ಲಿ ಶಾಕುಂತಲೆ ಸಿಕ್ಕಳು ಹಾಡು ಹಿಟ್ ಆಗಿತ್ತು. ಇದೀಗ ಮುಂದಿನ ಚಿತ್ರ ನಮ್ ಗಣಿ ಬಿ.ಕಾಂ ಪಾಸ್ ಒಪ್ಪಿಕೊಂಡಿದ್ದು ಅದನ್ನು ಅಭಿಷೇಕ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ ಮತ್ತು ಅವರೇ ನಾಯಕ ಕೂಡ.

ಕಿರು ಚಿತ್ರಗಳ ನಿರ್ದೇಶನ ಮೂಲಕ ಅನುಭವ ಗಳಿಸಿರುವ ಅಭಿಷೇಕ್ ಗಿದು ಬೆಳ್ಳಿತೆರೆಯಲ್ಲಿ ಮೊದಲ ಪ್ರಯೋಗ. ಮೆಟ್ರೊ ನಗರದಲ್ಲಿನ ಜೀವನ, ಇಲ್ಲಿ ಯುವಜನತೆ ಎದುರಿಸುವ ಸವಾಲುಗಳನ್ನು ಒಳಗೊಂಡ ಕಥೆಯಾಗಿರುತ್ತದೆ. ಅದನ್ನು ವಿನೋದ ರೀತಿಯಲ್ಲಿ ವಿವರಿಸಲಾಗಿದೆ. ಚಿತ್ರದ ಮೊದಲ ಶೆಡ್ಯೂಲ್ ಮುಗಿದಿದ್ದು ಎರಡನೇ ಭಾಗ ಫೆಬ್ರವರಿ ಮೊದಲ ವಾರದಲ್ಲಿ ಆರಂಭವಾಗಲಿದೆ ಎಂದರು ಐಶಾನಿ.

ಚಿತ್ರದಲ್ಲಿ ಎರಡು ರೀತಿಯಲ್ಲಿ ಐಶಾನಿ ಕಾಣಿಸಿಕೊಳ್ಳಲಿದ್ದಾರೆ. ಮೊದಲಿಗೆ ಶಾಲೆಯ ಹುಡುಗಿಯಾಗಿ ಮತ್ತು ನಂತರ ದೊಡ್ಡ ಹುಡುಗಿಯಾಗಿ. ನನ್ನ ಪಾತ್ರ ನಾಯಕನ ಜೀವನದಲ್ಲಿ ಬದಲಾವಣೆ ತರುತ್ತದೆ. ಒಂದು ಚಿತ್ರದಲ್ಲಿ ಎರಡು ಪಾತ್ರಗಳನ್ನು ನಿಭಾಯಿಸುವುದು ಖುಷಿ ಕೊಡುತ್ತದೆ ಎನ್ನುತ್ತಾರೆ.

ಬೃಂದಾವನ ಎಂಟರ್ ಪ್ರೈಸಸ್ ನಡಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಸುಧಾ ಬೆಳವಾಡಿ ಮತ್ತು ಜಹಂಗೀರ್ ಕೂಡ ನಟಿಸುತ್ತಿದ್ದಾರೆ. ವಿಕಾಸ್ ವಶಿಷ್ಟ ಅವರ ಸಂಗೀತವಿದೆ. ಹಿನ್ನಲೆ ಸಂಗೀತ ನೊಬಿಲ್ ಪೌಲ್ ಮತ್ತು ಛಾಯಾಗ್ರಹಣ ನಾಗರಾಜ್ ಅವರದ್ದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT