ದರ್ಶನ್, ಅಭಿಷೇಕ್, ನಿಖಿಲ್ 
ಸಿನಿಮಾ ಸುದ್ದಿ

ಡಿ ಬಾಸ್ ಮುಂದೆ ನಾನಿನ್ನು ಜ್ಯೂನಿಯರ್, ಅವರ ಬಗ್ಗೆ ಅಪಾರ ಗೌರವವಿದೆ: ಅಭಿ- ನಾನು ಚೆನ್ನಾಗಿದ್ದೇವೆ'

ಬಹುತಾರಾಗಣದ, ಅದ್ದೂರಿ ವೆಚ್ಚದ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರದ ಆಡಿಯೋ, ಟ್ರೈಲರ್ ಲಾಂಚ್ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದಿದೆ...

ಬೆಂಗಳೂರು: ಬಹುತಾರಾಗಣದ, ಅದ್ದೂರಿ ವೆಚ್ಚದ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರದ ಆಡಿಯೋ, ಟ್ರೈಲರ್ ಲಾಂಚ್ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದಿದೆ. ಕುರುಕ್ಷೇತ್ರ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಅದಕ್ಕಾಗಿ ಡಬ್ಬಿಂಗ್ ಗಾಗಿ ನಟ ನಿಖಿಲ್ ಕುಮಾರ್ ತೆರಳಿದ್ದರು.
ಈ ವೇಳೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು,  ಡಿ ಬಾಸ್ ಬಗ್ಗೆ ನನಗೆ ಅಪಾರ ಗೌರವವಿದೆ. ವೈಯಕ್ತಿಕವಾಗಿ ಕ್ಲೋಸ್ ಇಲ್ಲ.ಆದ್ರೆ ಅವ್ರು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ,  ಆದರೆ ಪದೇ ಪದೇ ಭೇಟಿ ಆಗೋದು, ಮಾತನಾಡೋದು ಆ ರೀತಿ ಸ್ನೇಹ ಇಲ್ಲ ಎಂದರು. ಅಲ್ಲದೇ, ನಾನು ಎಲ್ಲರ ಜೊತೆ ಚೆನ್ನಾಗಿದ್ದೇನೆ. ಸಂಬಂಧಗಳಿಗೆ ನಾನು ತುಂಬಾ ಬೆಲೆ ಕೊಡುತ್ತೇನೆ. ನನಗೂ ಚಿತ್ರರಂಗದಲ್ಲಿ ಆತ್ಮೀಯ ಸ್ನೇಹಿತರಿದ್ದಾರೆ .ವೈಯಕ್ತಿಕವಾಗಿ ಅದನ್ನ ಹೇಳೋಕೆ ಆಗಲ್ಲ. ನನಗೆ ಯಾವುದೇ ಗರ್ವ ಅಹಂಕಾರ ಇಲ್ಲ ಎಂದು ಸ್ಪಷ್ಟ ಪಡಿಸಿದರು. 
ಜೆಡಿಎಸ್ ಪಕ್ಷದಲ್ಲಿ ನನಗೆ ಪಕ್ಷ ಸಂಘಟನೆಯ ಜವಾಬ್ದಾರಿ ಕೊಟ್ಟಿದ್ದಾರೆ. ಅದಕ್ಕಾಗಿ ಹೈದ್ರಾಬಾದ್‌ನ ಆಡಿಯೋ ಟ್ರೈಲರ್ ಲಾಂಚ್‌ ಇವೆಂಟ್‌ಗೆ ಬರಲಾಗಲಿಲ್ಲ. ಕ್ಷಮೆಯಾಚಿಸುತ್ತೇನೆ. ಜೆಡಿಎಸ್ ಪಕ್ಷ ಯುವ ಘಟಕದ ಪಕ್ಷದ ಅಧ್ಯಕ್ಷ ಮಾಡಿದ್ದಾರೆ. ಗೌರವ ಸ್ಥಾನದಲ್ಲಿ ಇದ್ದ ಕಾರಣ ಕಾರ್ಯಕರ್ತರು ಹಾಗೂ ಪಕ್ಷವನ್ನು ಬಿಟ್ಟು ಬರಲಾಗಲಿಲ್ಲ. ಸಿನಿಮಾ ನನ್ನ ಪ್ಯಾಶನ್, ನನ್ನಲ್ಲಿ ಆ ಪ್ಯಾಶನ್ ಸತ್ತೋಗಿದ ದಿನ ಸಿನಿಮಾ ಬಿಡುತ್ತೇನೆ. ಅಲ್ಲಿವರೆಗೆ ನಾನು ಸಿನಿಮಾ ಮಾಡುತ್ತಿರುತ್ತೇನೆ ಎರಡಕ್ಕೂ ಸಮಾನವಾಗಿ ಸಮಯ ಮೀಸಲಿಡುವ ಜವಾಬ್ದಾರಿ ನನ್ನ ಮೇಲಿದೆ ಎಂದು ತಿಳಿಸಿದ್ದಾರೆ. 
ಅಭಿಷೇಕ್ ಅಂಬರೀಷ್ ಬಗ್ಗೆ ಮಾತನಾಡಿದ ನಿಖಿಲ್, ನಾವಿಬ್ಬರು ಚೆನ್ನಾಗಿದ್ದೇವೆ. ಚುನಾವಣೆಯಾದ ಮೇಲೆ ನಾವು ಭೇಟಿಯಾಗಿಲ್ಲ. ರಾಜಕೀಯ ಹೊರತುಪಡಿಸಿ ನಾವು ಚೆನ್ನಾಗಿದ್ದೇವೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT