ಉದಯೋನ್ಮುಖ ಕಲಾವಿದರು ತಮ್ಮ ಪ್ರತಿಭೆ ತೋರಿಸಲು ಉತ್ತಮ ವೇದಿಕೆ ಕಿರುಚಿತ್ರ ಕಿರುಚಿತ್ರಗಳ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿರುವ ಸಾಕಷ್ಟು ಪ್ರತಿಭೆಗಳು ಹಿರಿತೆರೆಗೂ ಪಾದಾರ್ಪಣೆ ಮಾಡುತ್ತಿದ್ದಾರೆ
ಕೆಲವು ದಿಗಳ ಹಿಂದೆ ಸಂತೋಷ್.ಬಿ (ಸಂತು) ಅವರ ನಿರ್ದೇಶನದಲ್ಲಿ 27 ನಿಮಿಷಗಳ `ವಿಧಾತ್ರು` ಕಿರುಚಿತ್ರ ನಿರ್ಮಾಣವಾಗಿತ್ತು. ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ ಸೈಮಾ ಕಿರುಚಿತ್ರೋತ್ಸವದಲ್ಲಿ `ವಿಧಾತ್ರು` ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅತ್ಯುತ್ತಮ ನಿರ್ದೇಶನಕ್ಕಾಗಿ ಸಂತೋಷ್ ಅವರಿಗೆ ಹಾಗೂ ಅತ್ಯುತ್ತಮ ಪೋಷಕ ಪ್ರಧಾನ ಪಾತ್ರಕ್ಕಾಗಿ ನಾಗೇಂದ್ರ ಶಾ ಅವರಿಗೆ ಪ್ರಶಸ್ತಿ ಸಂದಿದೆ
ಅಪ್ಪ-ಮಗನ ಸಂಬಂಧದ ಕಥೆ ಹೊಂದಿರುವ ಈ ಕಿರುಚಿತ್ರವನ್ನು ಪೆನ್ಸಿಲ್ ಕಟ್ ಬ್ಯಾನರ್ ಲಾಂಛನದಲ್ಲಿ ನವೀನ್ ಎಸ್.ಪಿ ಹಾಗೂ ಆಶಾ ಎಚ್.ಎಸ್ ನಿರ್ಮಿಸಿದ್ದಾರೆ. ಕಾರ್ತಿಕ್ ಶರ್ಮ ಸಂಗೀತ, ಆಶ್ಲೇ ಮೆಂಡೋಸಾ ಹಿನ್ನೆಲೆ ಸಂಗೀತ, ವಿಶ್ವಾಸ್ ಕೌಂಡಿನ್ಯ ಛಾಯಾಗ್ರಹಣ, ಪ್ರಕಾಶ್ ಕಾರಿಂಜಾ ಸಂಕಲನ ಈ ಕಿರುಚಿತ್ರಕ್ಕಿದೆ. ತಾರಾಗಣದಲ್ಲಿ ವಿವೇಕ್ ಸಿಂಹ, ತೇಜಸ್ವಿನಿ ಶೇಖರ್, ನಾಗೇಂದ್ರ ಶಾ, ಪದ್ಮಕಲಾ, ನಿಸರ್ಗ, ಗಿರೀಶ್, ವಿನೋದ್ ಜ್ಯೋತಿನಗರ್, ಪುರುಷೋತ್ತಮ್, ರಾಘವೇಂದ್ರ, ಸುನಿಲ್ ಕುಲಕರ್ಣಿ ಮುಂತಾದವರು ಅಭಿನಯಿಸಿದ್ದಾರೆ.