ಸಿನಿಮಾ ಸುದ್ದಿ

ಹುಟ್ಟುಹಬ್ಬದ ಹಾರ, ತುರಾಯಿ, ಕೇಕ್ ಹಣವನ್ನು ಅನಾಥಾಶ್ರಮಕ್ಕೆ ನೀಡಿ: ಗೋಲ್ಟನ್ ಸ್ಟಾರ್ ಗಣೇಶ್

Srinivasamurthy VN
ಬೆಂಗಳೂರು: ಸ್ಯಾಂಡಲ್ ವುಡ್ ನಟ, ಗೋಲ್ಡನ್ ಸ್ಟಾರ್ ಗಣೇಶ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಂತೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ಖಂಡಿತ ಬೇಸರ ಉಂಟು ಮಾಡಿದೆ.
ಪ್ರತಿ ವರ್ಷ ಜುಲೈ 2ರಂದು ಜನ್ಮದಿನದ ಸಂಭ್ರಮದಲ್ಲಿರುತ್ತಿದ್ದ ಗಣೇಶ್ ಗೆ ಈ ಸಲ ಏನಾಗಿದೆ ಅಂತೀರಾ? ಈ ಪ್ರಶ್ನೆಗೆ ಸ್ವತಃ ಗಣೇಶ್ ಅವರೇ ಟ್ವಿಟರ್ ಮೂಲಕ ಉತ್ತರ ಕೊಟ್ಟಿದ್ದಾರೆ.
ನನ್ನ ಪ್ರೀತಿಯ ಅಚ್ಚುಮೆಚ್ಚಿನ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರಲ್ಲಿ ವಿನಂತಿ. ಕೆಲ ದಿನಗಳ ಹಿಂದಷ್ಟೆ ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ಅಲ್ಲದೆ ಜನ್ಮದಿನದ ಸಂದರ್ಭದಲ್ಲಿ ನಾವ್ಯಾರೂ ಮನೆಯಲ್ಲಿ ಇರುವುದಿಲ್ಲ. ಹೀಗಾಗಿ ದೂರದೂರಿನಿಂದ ಬಂದು ನನಗಾಗಿ ಕಾಯಬೇಡಿ. ಹಾರ, ಕೇಕ್, ಬ್ಯಾನರ್ ಗಳಿಗಾಗಿ ಖರ್ಚು ಮಾಡದೆ, ಅದೇ ಹಣವನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ನೀಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.
“ಪ್ರತಿ ವರ್ಷ ಸಿದ್ಧತೆಗಳೊಂದಿಗೆ ಬಂದು ಶುಭ ಕೋರಿ ಹಾರೈಸುತ್ತಿದ್ದ ಅಭಿಮಾನಿಗಳಿಗೆ ಸದಾ ಋಣಿ. ನನ್ನ ಕೋರಿಕೆಯನ್ನು ಅರ್ಥ ಮಾಡಿಕೊಂಡು, ಗಂಭೀರವಾಗಿ ಪರಿಗಣಿಸುವಿರಿ ಎಂಬ ವಿಶ್ವಾಸವಿದೆ. ದಯಮಾಡಿ ಸಹಕರಿಸಿ. ನಿಮ್ಮ ಪ್ರೀತಿ ಸದಾ ನನ್ನ ಮೇಲಿರಲಿ” ಎಂದು ಗಣೇಶ್ ಟ್ವೀಟ್ ಮಾಡಿದ್ದಾರೆ.
SCROLL FOR NEXT