ಬೆಲ್ ಬಾಟಮ್ ಹಿಂದಿ ರಿಮೇಕ್ ನಲ್ಲಿ ಅಕ್ಷಯ್ ಕುಮಾರ್ ಅಭಿನಯ! 
ಸಿನಿಮಾ ಸುದ್ದಿ

ಬೆಲ್ ಬಾಟಮ್ ಹಿಂದಿ ರಿಮೇಕ್ ನಲ್ಲಿ ಅಕ್ಷಯ್ ಕುಮಾರ್ ಅಭಿನಯ!

ಕನ್ನಡದ ಯಶಸ್ವಿ ಚಿತ್ರ ರಿಷಬ್ ಶೆಟ್ಟಿಯವರ "ಬೆಲ್ ಬಾಟಮ್" ಚಿತ್ರವೀಗ ಹಿಂದಿ ಭಾಷೆಯಲ್ಲಿ ರಿಮೇಕ್ ಆಗಲಿದ್ದು 'ಹೌಸ್‌ಫುಲ್ 4' ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರವನ್ನು ನಿಖಿಲ್ ಅಡ್ವಾಣಿ ನಿರ್ಮಿಸಲಿದ್ದಾರೆ.

ಕನ್ನಡದ ಯಶಸ್ವಿ ಚಿತ್ರ ರಿಷಬ್ ಶೆಟ್ಟಿಯವರ "ಬೆಲ್ ಬಾಟಮ್" ಚಿತ್ರವೀಗ ಹಿಂದಿ ಭಾಷೆಯಲ್ಲಿ ರಿಮೇಕ್ ಆಗಲಿದ್ದು 'ಹೌಸ್‌ಫುಲ್ 4' ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರವನ್ನು ನಿಖಿಲ್ ಅಡ್ವಾಣಿ ನಿರ್ಮಿಸಲಿದ್ದಾರೆ.

ಬೆಲ್ ಬಾಟಮ್ ಕನ್ನಡ ಚಿತ್ರದ ಅಧಿಕೃತ ರೂಪಾಂತರದಲ್ಲಿ ಅಕ್ಷಯ್ ಕುಮಾರ್ ಕಾಣಿಸ್ಕೊಳ್ಳಲಿದ್ದಾರೆ. ಕನ್ನಡದಲ್ಲಿ ಈ ವರ್ಷಾರಂಭದಲ್ಲಿ ತೆರೆ ಕಂಡಿದ್ದ ಬೆಲ್ ಬಾಟಮ್ ಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದರು.  ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದರು. ಇದು 2019 ರ ಅತಿದೊಡ್ಡ ಕನ್ನಡ ಹಿಟ್‌ಗಳಲ್ಲಿ ಒಂದಾಗಿದೆ ಮತ್ತು ಅದರ ಮನರಂಜನಾ ಅಂಶದಿಂದಾಗಿ ಇಷ್ಟವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

"ನಿಖಿಲ್ ಅಡ್ವಾಣಿ ಈ ಚಿತ್ರವನ್ನು ನೋಡಿದ್ದಾರೆ ಮತ್ತು ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಹಾಗಾಗಿ ಅದರ ರಿಮೇಕ್ ಹಕ್ಕುಗಳನ್ನು ಖರೀದಿಸಲು ನಿರ್ಧರಿಸಿದ್ದಾರೆ. ರಂಜಿತ್ ತಿವಾರಿ ಅದನ್ನು ನಿರ್ದೇಶನ ಮಾಡಲು ತೀರ್ಮಾನಿಸಿದ್ದಾರೆ. ಇವರ ಮೊದಲ ಚಿತ್ರ ಲಕ್ನೋ ಸೆಂಟ್ರಲ್ ವಿಫಲವಾದರೂ,  ಅವರ ಸಾಮರ್ಥ್ಯಗಳ ಬಗೆಗೆ ನಂಬಿಕೆ ಇಟ್ಟು ನಿಖಿಲ್ ಅವರಿಗೆ ಈ ಜವಾಬ್ದಾರಿ ವಹಿಸಿದ್ದಾರೆ.ಸಧ್ಯ ಚಿತ್ರಕಥೆ ಕ್ರಚನೆ ನಡೆಯುತ್ತಿದ್ದು 2019 ರ ಅಂತ್ಯದ ಮೊದಲು ಪೂರ್ಣಗೊಳ್ಳುವ ನಿರೀಕ್ಷೆಯಿ

"ಅಕ್ಷಯ್ ಕುಮಾರ್, ನಿಖಿಲ್ ಅಡ್ವಾಣಿ ಮತ್ತು ವಶು ಭಗ್ನಾನಿ ಅವರೊಂದಿಗೆ ಟಿ-ಸೀರೀಸ್‌ನ ಭೂಷಣ್ ಕುಮಾರ್ ಕೂಡ ನಿರ್ಮಾಪಕರಾಗಿ  ಕೆಲಸ ಮಾಡಲಿದ್ದಾರೆ.ಎನ್ನಲಾಗಿದೆ. ಇನ್ನು ರೀಮೇಕ್ ಚಿತ್ರಕ್ಕೆ "ಬೆಲ್ ಬಾಟಮ್" ಎಂಬ ಶೀರ್ಷಿಕೆಯನ್ನೇ ಇಡಬೇಕೆ ಅಥವಾ ಬೇರೆ ಶೀರ್ಷಿಕೆ ಬೇಕೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ." ಅಕ್ಷಯ್ ಕುಮಾರ್ ಅವರ ಗುಡ್ ನ್ಯೂವ್ಜ್ 2020 ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT