ಸಿನಿಮಾ ಸುದ್ದಿ

ಆಸ್ಪತ್ರೆಯಿಂದಲೇ 'ಹಲೋ' ಎಂದ ಎಸ್‌ಪಿಬಿ, ಆರೋಗ್ಯದಲ್ಲಿ ಚೇತರಿಕೆ ಇದೆ ಎಂದ ಕುಟುಂಬ

ಪ್ರಖ್ಯಾತ  ಹಿನ್ನೆಲೆ ಗಾಯಕ  ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಕೆಲವು ದಿನಗಳ ಹಿಂದೆ ಕೊರೋನಾವೈರಸ್ ಸೋಂಕಿಗೆ ತಿತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಇಂದು  ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ವೆಂಟಿಲೇಟರ್ ಅಳವಡಿಸಲಾಗಿದೆ ಎಂಬ ಸುದ್ದಿ ಬೆನ್ನಲ್ಲೇ ಅವರ ಅಪಾರ ಅಭಿಮಾನಿ ಬಳಗ ಆತಂಕಕ್ಕೆ ಒಳಗಾಗಿದೆ, ಆದರೆ ಇದೀಗ ಸ್ವತಃ ಬಾಲಸುಬ್ರಹ್ಮಣ್ಯಂ ಅವರೇ ಫೇಸ್‌ಬುಕ್ ಪ್ರೊಫ

ಪ್ರಖ್ಯಾತ  ಹಿನ್ನೆಲೆ ಗಾಯಕ  ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಕೆಲವು ದಿನಗಳ ಹಿಂದೆ ಕೊರೋನಾವೈರಸ್ ಸೋಂಕಿಗೆ ತಿತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಇಂದು  ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ವೆಂಟಿಲೇಟರ್ ಅಳವಡಿಸಲಾಗಿದೆ ಎಂಬ ಸುದ್ದಿ ಬೆನ್ನಲ್ಲೇ ಅವರ ಅಪಾರ ಅಭಿಮಾನಿ ಬಳಗ ಆತಂಕಕ್ಕೆ ಒಳಗಾಗಿದೆ, ಆದರೆ ಇದೀಗ ಸ್ವತಃ ಬಾಲಸುಬ್ರಹ್ಮಣ್ಯಂ ಅವರೇ ಫೇಸ್‌ಬುಕ್ ಪ್ರೊಫೈಲ್ ಮೂಲಕ ವಿಡಿಯೋ ಸಂದೇಶ ಹಾಕಿದ್ದು ತಾವು ಆರೋಗ್ಯವಾಗಿರುವುದಾಗಿ ಸಂಜ್ಞೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.

"ತಮ್ಮ ಕುಟುಂಬ ಸದಸ್ಯರ ಆರೋಗ್ಯವನ್ನು ಅಪಾಯಕ್ಕೆ ತಳ್ಳಲು ಇಚ್ಚಿಸದೆ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯಲು ಬಯಸಿದ್ದೇನೆ "ಎಸ್‌ಪಿಬಿ ಹೇಳಿದ್ದಾರೆ.

ಇನ್ನು ಗಾಯಕರ ಪುತ್ರರಾದ ಎಸ್‌ಪಿ ಚರಣ್ ಪತ್ರಿಕಾಗೋಷ್ಠಿಯನ್ನು ನಡೆಸಿ "ತಂದೆಯವರ ಆರೋಗ್ಯ ಸ್ಥಿರವಾಗಿದೆ, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ" ಎಂದಿದ್ದು ಇದು ಎಲ್ಲಾ ತಮಿಳು ಸುದ್ದಿ ಮಾದ್ಯಮಗಳಲ್ಲಿ ವರದಿಯಾಗಿದೆ,

ಇದೀಗ ಗಾಯಕನ ಅಭಿಮಾನಿಗಳಲ್ಲಿ ಆಶಾವಾದ ತುಂಬಲು ಆಸ್ಪತ್ರೆ ಯಿಂದ ಎಸ್‌ಪಿಬಿಯ ಹೆಬ್ಬೆರಳು ತೋರಿಸುವ ಚಿತ್ರದೊಂದಿಗೆ ಸೌಂಡ್ ನೋಟ್ ಸಹ ಬಿಡುಗಡೆಯಾಗಿದೆ,  ಅವರ ಅನಾರೋಗ್ಯದ ಸುದ್ದಿ ಹೊರಬಂದಾಗಿನಿಂದಲೂ ಅವರ ಅಪಾರ ಭಿಮಾನಿಗಳಿಗೆ ಇದು ಸಮಾಧಾನ ತಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT