ನಿಧಿ ಸುಬ್ಬಯ್ಯ 
ಸಿನಿಮಾ ಸುದ್ದಿ

ವಿವಾಹದ ನಂತರ ಮೊಟ್ಟ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಿಧಿ ಸುಬ್ಬಯ್ಯ

ಮದುವೆಯಾದ ನಂತರ ಬಣ್ಣದ ಲೋಕದಿಂದ ಕೊಂಚ ದೂರಾಗಿದ್ದ ನಿಧಿ ಈಗ ವಿಭಿನ್ನ ಪ್ರಯತ್ನಗಳ ಮೂಲಕ ಮತ್ತೆ ಅಭಿನಯದಲ್ಲಿ ಸಕ್ರಿಯವಾಗುತ್ತಿದ್ದಾರೆ. ಮದುವೆಯಾದ ನಂತರ ಇದೇ ಮೊದಲ ಬಾರಿಗೆ ಕನ್ನಡದ ಹಾರರ್​ ಸಿನಿಮಾದಲ್ಲಿ ನಿಧಿ ಅಭಿನಯಿಸುತ್ತಿದ್ದಾರೆ.

ಮದುವೆಯಾದ ನಂತರ ಬಣ್ಣದ ಲೋಕದಿಂದ ಕೊಂಚ ದೂರಾಗಿದ್ದ ನಿಧಿ ಈಗ ವಿಭಿನ್ನ ಪ್ರಯತ್ನಗಳ ಮೂಲಕ ಮತ್ತೆ ಅಭಿನಯದಲ್ಲಿ ಸಕ್ರಿಯವಾಗುತ್ತಿದ್ದಾರೆ. ಮದುವೆಯಾದ ನಂತರಇದೇ ಮೊದಲ ಬಾರಿಗೆ ಕನ್ನಡದ ಹಾರರ್​ ಸಿನಿಮಾದಲ್ಲಿ ನಿಧಿ ಅಭಿನಯಿಸುತ್ತಿದ್ದಾರೆ. 

ಇಬ್ಬರು ನಿರ್ದೇಶಕರು ನಿರ್ದೇಶನ ಮಾಡುತ್ತಿರುವ ಹಾರರ್​ ಸಿನಿಮಾದಲ್ಲಿ ನಿಧಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸಾದ್​ ಹಾಗೂ ಪವನ್​ ಎಂಬುವರು ಈ ಹಾರರ್​ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ತಮ್ಮ ಮೊದಲ ಹಾರರ್​ ಸಿನಿಮಾ ಬಗ್ಗೆ ಮಾತನಾಡಿರುವ ನಿಧಿ, ಇದೇ ಮೊದಲ ಸಲ ಈ ರೀತಿಯ ಚಿತ್ರಕ್ಕೆ ಕೈ ಹಾಕಿದ್ದೇನೆ ಎಂದಿದ್ದಾರೆ.  ನಿಧಿ ಸುಬ್ಬಯ್ಯ ಅವರಿಗೆ ನಿತ್ಯ ಹಾರರ್​ ಸಿನಿಮಾ ನೋಡುವ ಅಭ್ಯಾಸ ಇದೆಯಂತೆ. ಆದರೆ, ಈಗ ಅವರೇ ಇಂತಹ ಸಿನಿಮಾದ ಭಾಗವಾಗಲಿದ್ದಾರೆ. ಈ ಬಗ್ಗೆ ನಟಿಗೆ ಕಾತರ ಹಾಗೂ ಖುಷಿ ಇದೆ. 

ಈಗಾಗಲೇ ಬಾಲಿವುಡ್​ನಲ್ಲೂ ನಟಿಸಿರುವ ನಿಧಿ ಕಡೆಯದಾಗಿ ಶಿವಣ್ಣ ಹಾಗೂ ರಚಿತಾ ರಾಮ್​ ಅಭಿನಯದ ಆಯುಷ್ಮಾನ್​ ಭವ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಟಿ ನಿಧಿ ಸುಬ್ಬಯ್ಯ ಹಾರರ್​ ಸಿನಿಮಾದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ. 

ಕೊರೋನಾ ಲಾಕ್ ಡೌನ್ ನಿಂದಾಗಿ ಮತ್ತೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ತಡವಾಯಿತು, ಅಣ್ಣಾ ಬಾಂಡ್, ಕೃಷ್ಣನ ಮ್ಯಾರೇಜ್ ಸ್ಟೋರಿ, ಮತ್ತು ಅಜಬ್ ಗಜಾಬ್ ಲವ್ ನಿಧಿ ನಟಿಸಿರುವ ಸಿನಿಮಾಗಳಾಗಿವೆ.

ಪಂಚರಂಗಿ ನಂತರ ನನಗೆ ಹಲವು ಅದೇ ರೀತಿಯ ಪಾತ್ರಗಳು ಸಿಕ್ಕವು, ಆದರೆ ಪಾತ್ರಗಳಲ್ಲಿ ಏಕತಾನತೆ ಕಂಡು ಬರುತ್ತದೆ ಎಂಬ ಕಾರಣಕ್ಕಾಗಿ ನಾನು ಆ ಸಿನಿಮಾಗಳಲ್ಲಿ ನಟಿಸಲಿಲ್ಲ,  ನಾನು ಉತ್ತಮ ಸಿನಿಮಾಗಳಿಗಾಗಿ ಕಾಯುತ್ತಿದ್ದೆ, ಅಂತಿಮವಾಗಿ ಹಾರರ್ ಸಿನಿಮಾ ನನಗೆ ಇಷ್ಟವಾಯಿತು, ಜನವರಿ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಎಂದು ನಿಧಿ ತಿಳಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT