ದರ್ಶನ್ 
ಸಿನಿಮಾ ಸುದ್ದಿ

ಹಿರಿಯ ನಟ ಅವಿನಾಶ್‍ ಅವರಿಗೆ ದಚ್ಚು ಬೈದಿದ್ದೇಕೆ? 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರಗಳಿಗೆ ಸದಾ ಬೆಂಬಲ ನೀಡುತ್ತ ಬಂದವರು, ಹೀಗಾಗಿ ದೊಡ್ಡ ಮನಸ್ಸಿನ ನಟ ಅನ್ನೋ ಪ್ರಖ್ಯಾತಿಗೂ ಪಾತ್ರರಾಗಿದ್ದಾರೆ.

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರಗಳಿಗೆ ಸದಾ ಬೆಂಬಲ ನೀಡುತ್ತ ಬಂದವರು, ಹೀಗಾಗಿ ದೊಡ್ಡ ಮನಸ್ಸಿನ ನಟ ಅನ್ನೋ ಪ್ರಖ್ಯಾತಿಗೂ ಪಾತ್ರರಾಗಿದ್ದಾರೆ.

ಇಂತಹ ದರ್ಶನ್ ‘ಮೌನಂ’ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಗಮಿಸುವ ವಿಚಾರಕ್ಕೆ ಹಿರಿಯ ನಟ ಅವಿನಾಶ್ ಅವರನ್ನು ಬೈದರಂತೆ! ಯಾಕೆ, ಆಶ್ಚರ್ಯ ಆಗ್ತಿದ್ರೂ ಸತ್ಯ.

ಆಡಿಯೋ ಬಿಡುಗಡೆಗೆ ದರ್ಶನ್ ಅವರನ್ನು ಕರೆಸುವ ಜವಾಬ್ದಾರಿಯನ್ನು ಚಿತ್ರತಂಡ ಅವಿನಾಶ್ ಅವರಿಗೆ ವಹಿಸಿತ್ತು ಆದರೆ ದಚ್ಚು ತುಂಬಾ ಬಿಝಿಯಾಗಿದ್ದ ಕಾರಣ ಬನ್ನಿ ಅಂತ ಫೋನ್ ಮಾಡೋದು ಹ್ಯಾಗೆ ಅಂತ ಅವಿನಾಶ್ ಸ್ವಲ್ಪ ಹಿಂದೇಟು ಹಾಕಿದ್ದರಂತೆ, ಹೀಗಾಗಿ ಗೆಳೆಯ ದೇವರಾಜ್ ಅವರಿಗೆ ಆ ಹೊಣೆಯನ್ನ ವಹಿಸಿದ್ದರಂತೆ.

ಈ ವಿಷಯ ತಿಳಿದ ದರ್ಶನ್‍, “ಹಿರಿಯ ನಟರಾದ ನೀವು ನಮ್ಮನ್ನ ಕರೆಯೋದಕ್ಕೆ ಹಿಂದೆ ಮುಂದೆ ನೋಡೋ ಅಗತ್ಯವಿಲ್ಲ , ಎಲ್ಲಿಗೆ ಬರಬೇಕು ಹೇಳಿ ಬರ್ತೀನಿ ಸದಾ ನಿಮ್ಮ ಬೆಂಬಲಕ್ಕೆ ನಿಲ್ತೀವಿ’ ಎಂದು ಪ್ರೀತಿಯಿಂದಲೇ ಬೈದಿದ್ದಾರೆ

“ಇದು ನಿಜಕ್ಕೂ ದೊಡ್ಡ ನಟನ ದೊಡ್ಡತನ” ಎಂದು ದರ್ಶನ್ ಎದುರು ನಟ ಅವಿನಾಶ್ ಮನದುಂಬಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT