ಸಿನಿಮಾ ಸುದ್ದಿ

'ವೈಯಕ್ತಿಕ ಸಿದ್ಧಾಂತದಿಂದ ಮನಸು ಒಡೆದ ಹಾಲಾಯಿತು, ನಾನು ಈಕೆಯನ್ನು ಬಹಳ ಇಷ್ಟಪಡುವೆ'

Shilpa D

ಬೆಂಗಳೂರು: ನೀರ್ ದೋಸೆ ಸಿನಿಮಾ ವಿವಾದದ ನಂತರ ಹಿರಿಯ ನಟ ಜಗ್ಗೇಶ್  ಟ್ವಿಟ್ಟರ್ ನಲ್ಲಿ ಆಗಾಗ್ಗೆ ನಟಿ ರಮ್ಯಾ ಅವರ ಕಾಲೆಳೆಯುತ್ತಿದ್ದರು, ಆದರೆ ನಿನ್ನೆ ಜಗ್ಗೇಶ್ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ರಮ್ಯಾ ಅವರ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ. 

ಪುನೀತ್ ರಾಜಕುಮಾರ್​ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ತುಂಬ ಹಿಂದೆ ನಟಿ ರಮ್ಯಾ ಪಾಲ್ಗೊಂಡಿದ್ದರು. ಅದರಲ್ಲಿ ರಮ್ಯಾ ಅವರು ಪುನೀತ್​ ರಾಜ್​ಕುಮಾರ್​ ಅವರ ಬಳಿ ಜಗ್ಗೇಶ್​ ಅವರ ಮಿಮಿಕ್ರಿ ಮಾಡಲು ಕೇಳಿದ್ದರು. ಆಗ ಪುನೀತ್​ ಕೂಡ ಜಗ್ಗೇಶ್​ ಅವರ ಎರಡು ಡೈಲಾಗ್​ಗಳನ್ನು ಮಿಮಿಕ್ರಿ ಮಾಡಿದ್ದರು. 

ಈಗ ಅದೇ ಫನ್ನಿ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡ ನಟ ಜಗ್ಗೇಶ್​ ಅವರು ರಮ್ಯಾರನ್ನು ಹೊಗಳಿದ್ದಾರೆ. ನಾನು ರಮ್ಯಾ ಅವರನ್ನು ವೈಯಕ್ತಿಕವಾಗಿ ತುಂಬ ಇಷ್ಟಪಡುತ್ತೇನೆ.ಆದರೆ ಕೆಲ ಸಿದ್ಧಾಂತಗಳಿಂದಾಗಿ ಮನಸು ಒಡೆದ ಹಾಲಾಯಿತು. ಈಕೆ ಒಳ್ಳೆಯ ನಟಿ. ಮತ್ತೆ ನಟಿಸಲಿ ಎಂದು ಹಾರೈಸುವೆ. ರಮ್ಯಾ ಅವರು ವಾಪಸ್​ ಬರಲಿ. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿದ್ದಾರೆ.
 

SCROLL FOR NEXT