ಸಿನಿಮಾ ಸುದ್ದಿ

ಜ್ವಲಂತಂ ಚಿತ್ರದ ಬಳಿಕ ಕಾಲಾಂತಕ ಚಿತ್ರಕ್ಕೆ ಕೈ ಹಾಕಿದ ನಿರ್ದೇಶಕ!

Vishwanath S

ಜ್ವಲಂತಂ ಚಿತ್ರದ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅಂಬರೀಶ್ ಅವರು ಇದೀಗ ಕಾಲಾಂತಕ ಚಿತ್ರದ ಮೂಲಕ ಮತ್ತೊಮ್ಮೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. 

ವಿಶಿಷ್ಟ ಶೀರ್ಷಿಕೆಯನ್ನು ಮಾರ್ಕಂಡೇಯ ಪುರಾಣದಿಂದ ಪಡೆಯಲಾಗಿದೆ. ಸಮಯ ಮತ್ತು ಮರಣವನ್ನು ಜಯಿಸಿದ ಶಿವನ ಒಂದು ಅಂಶವಾಗಿದೆ. ಕಮರ್ಷಿಯಲ್ ಸಸ್ಪೆನ್ಸ್ ಥ್ರಿಲ್ಲರ್ ಅನ್ನು ಅಬಾಚೂರ್ ಎಂಬ ಸಣ್ಣ ಪಟ್ಟಣದಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಸ್ ಜೊತೆಗೆ ಶ್ರೀಧರ್ ಕೆ, ಧರ್ಮೇಂದ್ರ ಉರ್ಸ್, ಯಶ್ವಂತ್ ಶೆಟ್ಟಿ, ಕರ್ತಾ ಸಮಾಗಾ ಮತ್ತು ಸುಶ್ಮಿತಾ ಜೋಶಿ ಇತರರು ಕಾಣಿಸಿಕೊಂಡಿದ್ದಾರೆ.

ಬೆಂಗಳೂರು, ಚಿಕ್ಕಮಗಳೂರು ಮತ್ತು ಮೂಡಿಗೆರೆಯಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ಅಂಬರೀಶ್ ಅವರೇ ನಿರ್ವಹಿಸುತ್ತಿದ್ದಾರೆ. 

ಚಿತ್ರದ ಮೊದಲ ಟೀಸರ್ ಜನವರಿ 9ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರಕ್ಕೆ ಶಾಂತಕುಮಾರ್ ಬಂಡವಾಳ ಹೂಡುತ್ತಿದ್ದಾರೆ. ಜುಡಾ ಸ್ಯಾಂಡಿ ಸಂಗೀತ ಸಂಯೋಜಿಸುತ್ತಿದ್ದು ಎಸ್ ಹಾಲೇಶ್ ಛಾಯಾಗ್ರಹಣವಿರಲಿದೆ.

SCROLL FOR NEXT