ಚನ್ನಪಟ್ಟಣ: ಕನ್ನಡದ ನಿರ್ದೇಶಕನ ಜೊತೆ ನಟಿಯೊರ್ವಳು ಓಡಿ ಹೋಗಿದ್ದರಿಂದ ಮನನೊಂದ ನಟಿ ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿರ್ದೇಶಕ ಆಂಜಿನಪ್ಪ ಜೊತೆ ನಟಿ ವಿಜಯಲಕ್ಷ್ಮೀ ಎಸ್ಕೇಪ್ ಆಗಿದ್ದಾಳೆ. ಈ ಸುದ್ದಿ ತಿಳಿದ ಕೂಡಲೇ ನಟಿಯ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ತಮ್ಮ ಮರ್ಯಾದೆ ಹೋಗಿದೆ ಎಂಬ ಕಾರಣಕ್ಕೆ ನಟಿಯ ತಾಯಿ ಮತ್ತು ಅಜ್ಜಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಕನ್ನಡ ಜವಾರಿ ಇನ್ ಲವ್, ರಾಜೀವ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಜಯಲಕ್ಷ್ಮೀ ಅಭಿನಯಿಸಿದ್ದಾರೆ. ಇನ್ನು ತುಂಗಭದ್ರ ಚಿತ್ರದ ಶೂಟಿಂಗ್ ಇದೆ ಅಂತಾ ಹೇಳಿ ವಿಜಯಲಕ್ಷ್ಮೀ ಮನೆಯಿಂದ ಹೋಗಿದ್ದು ನಂತರ ಮನೆಗೆ ಬಂದಿರಲಿಲ್ಲ. ಅಲ್ಲದೆ ಆಂಜಿನಪ್ಪ ಜೊತೆ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಆಂಜಿನಪ್ಪ ವಿರುದ್ಧ ವಿಜಯಲಕ್ಷ್ಮಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.