ಸುನಿ, ಗನೇಶ್, ನಿರ್ಮಾಪಕ ಸುಪ್ರೀತ್ 
ಸಿನಿಮಾ ಸುದ್ದಿ

ಮತ್ತೆ ಒಂದಾದ 'ಚಮಕ್' ಜೋಡಿಗೆ ಸಿಕ್ತು ನಿರ್ಮಾಪಕ ಸುಪ್ರೀತ್ ಕೃಪಾಕಟಾಕ್ಷ

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಚಮಕ್ ಖ್ಯಾತಿಯ ನಿರ್ದೇಶಕ ಸುನಿ ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಕೆಲ ಸಮಯದಿಂದ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇದೀಗ ಅದಕ್ಕೆ ಪುಷ್ಟಿ ಎಂಬಂತೆ , ನಿರ್ಮಾಪಕ ಸುಪ್ರೀತ್ ಸಹ ಅವರೊಡನೆ ಕೈಜೋಡಿಸಲು ಬರುತ್ತಿದ್ದಾರೆ. ಇವರು ಶ್ರೀಮುರಳಿಯ "ಭರಾಟೆ" ಯೊಂದಿಗೆ ತಮ್ಮ ಪ್ರೊಡಕ್ಷನ್ ವ್ಯವಹಾರ ಪ್ರಾರಂಭಿಸಿದವರು. ಬಂಪರ್ ಗಾಗಿ ಧನ್ವೀರ

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಚಮಕ್ ಖ್ಯಾತಿಯ ನಿರ್ದೇಶಕ ಸುನಿ ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಕೆಲ ಸಮಯದಿಂದ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇದೀಗ ಅದಕ್ಕೆ ಪುಷ್ಟಿ ಎಂಬಂತೆ , ನಿರ್ಮಾಪಕ ಸುಪ್ರೀತ್ ಸಹ ಅವರೊಡನೆ ಕೈಜೋಡಿಸಲು ಬರುತ್ತಿದ್ದಾರೆ. ಇವರು ಶ್ರೀಮುರಳಿಯ "ಭರಾಟೆ" ಯೊಂದಿಗೆ ತಮ್ಮ ಪ್ರೊಡಕ್ಷನ್ ವ್ಯವಹಾರ ಪ್ರಾರಂಭಿಸಿದವರು. ಬಂಪರ್ ಗಾಗಿ ಧನ್ವೀರ್ ಅವರೊಂದಿಗೆ ಸಂಪರ್ಕದಲ್ಲಿದ್ದರು. ಹಾಗೆ ಇದು ಅವರ ಮೂರನೇ ಯೋಜನೆಯಾಗಿರಲಿದೆ.

ಇನ್ನೂ ಹೆಸರಿಡಲಾಗಿರುವ ಈ ಚಿತ್ರವನ್ನು ಸುಪ್ರಿತ್ ಪ್ರೊಡಕ್ಷನ್ ಮತ್ತು ಕೆವಿಎನ್ ಪ್ರೊಡಕ್ಷನ್ ಹೌಸ್ ಜಂಟಿಯಾಗಿ ನಿರ್ಮಾಣ ಂಆಡಲಿದೆ. . ಗಣೇಶ್ ಮತ್ತು ಸುನಿ ಅವರ ಸಂಯೋಜನೆಯು ಚಮಕ್ ಎಂಬ ರೊಮ್ಯಾಂಟಿಕ್ ಡ್ರಾಮಾ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಸುನಿ ಜನರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಹೆಸರುವಾಸಿಯಾಗಿದ್ದಾನೆ ಮತ್ತು ಅಷ್ಟೇ ಆಸಕ್ತಿದಾಯಕ ವಿಷಯದೊಂದಿಗೆ ಬಂದಿದ್ದಾನೆಂದು ಹೇಳಲಾಗುತ್ತದೆ, ಇದಕ್ಕಾಗಿ ಅವರು ಚಿತ್ರಕಥೆಯನ್ನು ಬರೆಯುತ್ತಿದ್ದಾರೆ. ಫೆಬ್ರವರಿಯಲ್ಲಿ  ಸೆಟ್ಟೇರುವ ಸಾಧ್ಯತೆಯಿರುವ ಈ ಚಿತ್ರದ ಮೂಲಕ ಇಬ್ಬರೂ  ತಮ್ಮ ಎರಡನೇ ಯೋಜನೆಯೊಂದಿಗೆ ಮತ್ತೆ ಚಮಕ್ ಮ್ಯಾಜಿಕ್ ರಚಿಸಲು ಸಜ್ಜಾಗಿದ್ದಾರೆ. ಅದಕ್ಕೂ ಮೊದಲು, ಅವರು ಚಿತ್ರದ ಶೀರ್ಷಿಕೆ ಮತ್ತು ಸ್ಟಾರ್ ಪಾತ್ರವನ್ನು ಅಂತಿಮಗೊಳಿಸಲಿದ್ದಾರೆ.

ಗಣೇಶ್ ಪ್ರಸ್ತುತ ರಮೇಶ್ ರೆಡ್ಡಿ ನಿರ್ಮಿಸಿರುವ ಯೋಗರಾಜ್ ಭಟ್ ಅವರ ಗಾಳಿಪಟ 2 ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಮಹೇಶ್ ಗೌಡಬಲ್ ರೈಡಿಂಗ್‌ ಗೆ ಸಹ ಅವರು  ಗ್ರೀನ್ ಸಿಗ್ನಲ್ ನೀಡಿದ್ದಾರೆ. ಏತನ್ಮಧ್ಯೆ, ನಿರ್ದೇಶಕ ಸುನಿ ಪ್ರಸ್ತುತ ಅವತಾರ ಪುರುಷ ಚಿತ್ರಕ್ಕೆ ಬದ್ಧರಾಗಿದ್ದಾರೆ, ಇದು ಪುಷ್ಕರ್ ಫಿಲ್ಮ್ಸ್ನ ಬ್ಯಾನರ್ ಅಡಿಯಲ್ಲಿ ಶರಣ್ ಮತ್ತು ಆಶಿಕಾ ರಂಗನಾಥ್ ನಟಿಸಿರುವ ಚಿತ್ರವಾಗಿದೆ.  ಹರಿ ಸಂತೋಷ್ ನಿರ್ದೇಶನದ ಧನ್ವೀರ್ ಬಂಪರ್ ಚಿತ್ರದೊಡನೆ ಸುಪ್ರೀತ್ ಏಕಕಾಲಕ್ಕೆ ಗಣೇಶ್ ನಟನೆಯ ಚಿತ್ರಕ್ಕೆ ಬಂಡವಾಳ ಹೂಡುವವರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

SCROLL FOR NEXT