ಸ್ಪಂದನಾ 
ಸಿನಿಮಾ ಸುದ್ದಿ

'ಲೆಟ್ಸ್ ಬ್ರೇಕಪ್'- ಶ್ರೀಲೀಲಾ ಜಾಗಕ್ಕೆ ಸ್ಪಂದನಾ ಎಂಟ್ರಿ

ಶೂಟಿಂಗ್ ಶೆಡ್ಯೂಲ್ ಗಳ ಹೊಂದಾಣಿಕೆಯಾಗದ ಕಾರಣ ನಟಿ ಶ್ರೀಲೀಲಾ 'ಲೆಟ್ಸ್ ಬ್ರೇಕಪ್' ನಿಂದ ದೂರವಾಗಿದ್ದಾರೆ. ಹಾಗೆಯೇ ಆಕೆಯ ಸ್ಥಾನದಲ್ಲಿ ಸಂಜನಾ ದಾಸ್ ಆಗಮಿಸಿದ್ದಾರೆ. ವಿಶೇಷವೆಂದರೆ ಸಂಜನಾ ದಾಸ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿರುವಾಗಲೇ ಅವರಿಗೆ "ಸ್ಪಂದನಾ" ಎಂದು ಹೊಸ ಹೆಸರೂ ಸಿಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ಇದಾಗಲೇ ಸಂಜನಾ ಹೆಸರಿನ ಹಲವು ನಟಿಯರಿರುವ

ಶೂಟಿಂಗ್ ಶೆಡ್ಯೂಲ್ ಗಳ ಹೊಂದಾಣಿಕೆಯಾಗದ ಕಾರಣ ನಟಿ ಶ್ರೀಲೀಲಾ 'ಲೆಟ್ಸ್ ಬ್ರೇಕಪ್' ನಿಂದ ದೂರವಾಗಿದ್ದಾರೆ. ಹಾಗೆಯೇ ಆಕೆಯ ಸ್ಥಾನದಲ್ಲಿ ಸಂಜನಾ ದಾಸ್ ಆಗಮಿಸಿದ್ದಾರೆ. ವಿಶೇಷವೆಂದರೆ ಸಂಜನಾ ದಾಸ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿರುವಾಗಲೇ ಅವರಿಗೆ "ಸ್ಪಂದನಾ" ಎಂದು ಹೊಸ ಹೆಸರೂ ಸಿಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ಇದಾಗಲೇ ಸಂಜನಾ ಹೆಸರಿನ ಹಲವು ನಟಿಯರಿರುವ ಕಾರಣ ಇವರಿಗೆ ಸ್ಪಂದನಾ ಎಂದು ಕರೆಯಲಾಗಿದೆಯಂತೆ. 

ಮನಸ್ಮಿತಾ ಚಿತ್ರದಲ್ಲಿ ಈ ನಟಿ ಅಭಿನಯಿಸುತ್ತಿದ್ದು ಚಿತ್ರದಲ್ಲಿ ಸ್ಪಂದನಾ ಪಾಲಿನ ಶೂಟಿಂಗ್ ಇದಾಗಲೇ ಮುಕ್ತಾಯವಾಗಿದೆ. ಇನ್ನು ಈ ನವನಟಿ  ಮೊದಲ ಬಾರಿಗೆ ನಾಯಕ ವಿಹಾನ್ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುತ್ತಿದ್ದಾರೆ

ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನೆಮಾದಲ್ಲಿ ನಟನೆಯ ಪಾಠ ಕಲಿತಿರುವ ಸಂಜನಾಮುಂಬೈನಲ್ಲಿ ಅನುಪಮ್ ಖೇರ್ ಅವರ ಜತೆಗೆ ಸಹ ತ್ತೊಂದು ಕೋರ್ಸ್ ಮಾಡಿದ್ದಾರೆ.

ಸ್ಪಂದಾನಾ ಇದೀಗ ಶ್ರೀಲೀಲಾ ಬದಲಿಯಾಗಿ ಕಾಣಿಸಿಕೊಳ್ಳುತ್ತಿದ್ದು ಈ ಚಿತ್ರದ ಶೂಟಿಂಗ್ ಮೇನಲ್ಲಿ ಪ್ರಾರಂಭವಾಗಲಿದೆ. ಚಿತ್ರ ನಿರ್ಮಾಪಕರು ಸ್ಪಂದನಾ ಅವರ ಆಡಿಷನ್ ತೆಗೆದುಕೊಂಡಿದ್ದು ರೊಮ್ಯಾಂಟಿಕ್ ಡ್ರಾಮಾಗೆ ಈ ನಟಿ ಸೂಕ್ತ ಆಯ್ಕೆ ಎಂದು ಭಾವಿಸಿದ್ದಾರೆ. ಜಯಣ್ಣ ಕಂಬೈನ್ಸ್ ನಿರ್ಮಾಣದ ಈ ಚಿತ್ರ ನಟಿ ಪಾಲಿಗೆ ದೊಡ್ಡ ವೇದಿಕೆಯಾಗಿರಲಿದೆ. 

ಈ ನಡುವೆ ಪ್ರೇಮಿಗಳ ದಿನದಂದು ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಲು ಚಿತ್ರತಂಡ ಸಿದ್ದತೆ ನಡೆಸಿದೆ. ಇನ್ನು ಲೆಟ್ಸ್ ಬ್ರೇಕಪ್‌ಗೆ ವಿನೀತ್ ರಾಜ್ ಮೆನನ್ ಸಂಗೀತ ಸಂಯೋಜಿಸಿದ್ದಾರೆ. ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ  ಸ್ವರೂಪ್ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ವಿಹಾನ್ ಜತೆಗಾತಿಯಾಗಿ ಸ್ಪಂದನಾ ಕಾಣಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT