ಶಕೀಲಾ, ಇಂದ್ರಜಿತ್ ಲಂಕೇಶ್ 
ಸಿನಿಮಾ ಸುದ್ದಿ

ಶಕೀಲಾ ಬಯೋಪಿಕ್ ಹಕ್ಕು ನನ್ನದು: ಇಂದ್ರಜಿತ್ ಲಂಕೇಶ್

ಸುಗೇಶ್ ನಿರ್ದೇಶನದ 'ಶಕೀಲಾ' ಮಲೇಯಾಳಂ ಚಿತ್ರದ ಟ್ರೈಲರ್  ಜೂನ್ 28 ರಂದು ಬಿಡುಗಡೆಯಾಗಿದ್ದು, ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಿನಿಮಾ ಏನಾಯಿತು ಎಂಬುದು ಸಿನಿ ರಸಿಕರನ್ನು ಕಾಡುತ್ತಿದೆ.

ಬೆಂಗಳೂರು: ಸುಗೇಶ್ ನಿರ್ದೇಶನದ 'ಶಕೀಲಾ' ಮಲೇಯಾಳಂ ಚಿತ್ರದ ಟ್ರೈಲರ್  ಜೂನ್ 28 ರಂದು ಬಿಡುಗಡೆಯಾಗಿದ್ದು, ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಿನಿಮಾ ಏನಾಯಿತು ಎಂಬುದು ಸಿನಿ ರಸಿಕರನ್ನು ಕಾಡುತ್ತಿದೆ.ರಿಚಾ ಚಡ್ಡಾ ಮತ್ತು ಪಂಕಜ್ ತ್ರಿಪಾಠಿ ನಟಿಸಿರುವ ಶಕೀಲಾ ಚೊಚ್ಚಲ ಬಾಲಿವುಡ್ ಚಿತ್ರವನ್ನು ಇಂದ್ರಜಿತ್ ನಿರ್ದೇಶಿಸಿದ್ದು, ಆ ಚಿತ್ರ ಬಿಡುಗಡೆಯಾಗಬೇಕಿದೆ.

ಮಲಯಾಳಂ ಹೊಸ ಚಿತ್ರವನ್ನು ವೀಕ್ಷಿಸಿದ ಜನರು,ಇಂದ್ರಜಿತ್ ಲಂಕೇಶ್ ನಿರ್ದೇಶನದ ಹಿಂದಿ ಚಿತ್ರದ ಬಗ್ಗೆ ಪ್ರಶ್ನಿಸುತ್ತಿದ್ದಾರೆ.ಟೀಸರ್ ಬಿಡುಗಡೆಯಾದ ಬಳಿಕ ಸಾಕಷ್ಟು ಫೋನ್ ಕರೆ ಹಾಗೂ ಸಂದೇಶಗಳು ಬಂದಿದ್ದು,ಅದೊಂದು ಕಿರು ಚಿತ್ರ ಎಂಬುದನ್ನು ತಿಳಿದಿದ್ದೇನೆ.
ಅದು ಶಕೀಲಾ ಜೀವನಾಧಾರಿತ ಚಿತ್ರವಲ್ಲಾ, ಆದಾಗ್ಯೂ,ಶಕೀಲಾ ಎಂಬ ಹೆಸರಿಟ್ಟಿರುವುದರಿಂದ ಟೀಸರ್ ಸಾಕಷ್ಟು ವೈರಲ್ ಆಗಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಶಕೀಲಾ ಬಯೋಫಿಕ್ ಹಕ್ಕನ್ನು ನಾನು ಪಡೆದುಕೊಂಡಿದ್ದು,ಚಿತ್ರವನ್ನು ಪೂರ್ಣಗೊಳಿಸಿದ್ದೇನೆ.ಅದೊಂದು ಮಹಿಳಾ ಕೇಂದ್ರಿತ  ಚಿತ್ರ. ಉತ್ತಮ ಸಂದೇಶವಿದೆ. ಸೆನ್ಸರ್ ಕೂಡಾ ಮುಗಿದಿದ್ದು, ಚಿತ್ರ ಬಿಡುಗಡೆಯಷ್ಟೇ ಬಾಕಿಯಿದೆ ಎಂದು ಅವರು ತಿಳಿಸಿದ್ದಾರೆ.

ಮ್ಯಾಜಿಕ್ ಸಿನಿಮಾ ಪ್ರೊಢಕ್ಷನ್ ಹೌಸ್  ಚಿತ್ರಮಂದಿರ ಪುನರ್ ಆರಂಭಕ್ಕೆ ಕಾಯುತ್ತಿದೆ. ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಮಾಡುವ ಕುರಿತಂತೆಯೂ ವಿಚಾರಿಸುತ್ತಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಶಕೀಲಾ ವಿಶ್ವದಾದ್ಯಂತ ಜನಪ್ರಿಯರಾಗಿದ್ದಾರೆ.ಸ್ಟ್ರೀಮಿಂಗ್ ಫ್ಲಾಟ್ ಫಾರ್ಮ್ ಗೆ ಆಕೆಯ ಬಯೋಪಿಕ್ ಸರಿಯಾಗಿದೆ ಆದರೆ, ಆಕೆಗೆ ದೊಡ್ಡ ಅಭಿಮಾನಿ ಬಳಗವೇ ಇದೆ.ಸಮಾಜದ ಎಲ್ಲಾ ವರ್ಗದವರು ಆಕೆಯ ಜೀವನಾಧಾರಿತ ಚಿತ್ರ ನೋಡಲು ಬಯಸುತ್ತಾರೆ. ಅದೇ ಕಾರಣದಿಂದ ಎರಡು ಫ್ಲಾಟ್ ಫಾರ್ಮ್ ಗಳಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ಎದುರು ನೋಡುತಿದ್ದಾರೆ.ಥಿಯೇಟರ್ ಓಪನ್ ಆದ ನಂತರ ಚಿತ್ರ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹಿಂದಿಯಲ್ಲಿ ಚಿತ್ರ ಮಾಡಿದ್ದರೂ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಗುವುದು, ಮುಂಬೈಯ ಬಹುರಾಷ್ಟ್ರೀಯ ಕಂಪನಿಯೊಂದು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಡಬ್ಬಿಂಗ್ ಮಾಡುವ ಹಕ್ಕು ಪಡೆದುಕೊಂಡಿದೆ ಎಂದು ಇಂದ್ರಜಿತ್ ಲಂಕೇಶ್ ಮಾಹಿತಿ ನೀಡಿದ್ದಾರೆ.

ಶಕೀಲಾ ಬಯೋಪಿಕ್ ನಲ್ಲಿ ಕನ್ನಡ ನಟ ಈಸ್ಟರ್ ನೊರೊನ್ಹಾ, ಮಲಯಾಳಂ ನಟ ರಾಜೀವ್ ಪಿಲ್ಲೈ ಕೂಡಾ ಅಭಿನಯಿಸುತ್ತಿದ್ದು, ವೀರ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT