ನಟಿ ಮೀರಾ ಚೋಪ್ರಾ 
ಸಿನಿಮಾ ಸುದ್ದಿ

ನಟಿ ಮೀರಾ ಚೋಪ್ರಾಗೆ ಆನ್ ಲೈನ್ ನಲ್ಲಿ ಬೆದರಿಕೆ: ಜ್ಯೂ.ಎನ್ ಟಿಆರ್ ಅಭಿಮಾನಿಗಳ ವಿರುದ್ಧ ದೂರು ದಾಖಲು!

ಟಾಲಿವುಡ್ ನ ಬಂಗಾರಂ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಮೀರಾ ಚೋಪ್ರಾಗೆ ಟ್ವಿಟರ್ ನಲ್ಲಿ ಜ್ಯೂ.ಎನ್ ಟಿಆರ್ ಅಭಿಮಾನಿಗಳು ಬೆದರಿಕೆ ಹಾಕಿ ಅಸಭ್ಯವಾಗಿ ನಿಂದಿಸಿದ್ದು, ಕಿರುಕುಳ ನೀಡಿದವರ ವಿರುದ್ಧ ನಟಿ ಸೈಬರ್ ಬೆದರಿಕೆ ದೂರು ದಾಖಲಿಸಿದ್ದಾರೆ. 

ಟಾಲಿವುಡ್ ನ ಬಂಗಾರಂ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಮೀರಾ ಚೋಪ್ರಾಗೆ ಟ್ವಿಟರ್ ನಲ್ಲಿ ಜ್ಯೂ.ಎನ್ ಟಿಆರ್ ಅಭಿಮಾನಿಗಳು ಬೆದರಿಕೆ ಹಾಕಿ ಅಸಭ್ಯವಾಗಿ ನಿಂದಿಸಿದ್ದು, ಕಿರುಕುಳ ನೀಡಿದವರ ವಿರುದ್ಧ ನಟಿ ಸೈಬರ್ ಬೆದರಿಕೆ ದೂರು ದಾಖಲಿಸಿದ್ದಾರೆ. 

ಜೂ.03 ರಂದು ಮಧ್ಯಾಹ್ನ ಆಸ್ಕ್ ಮೀರಾ ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಮೀರಾ ಅಭಿಮಾನಿಗಳೊಂದಿಗೆ ಟ್ವಿಟರ್ ಸಂವಾದದಲ್ಲಿ ತೊಡಗಿದ್ದರು. ಈ ವೇಳೆ ಸಿನಿ ಪ್ರಿಯರು ಮೀರಾ ಅವರಿಗೆ "ತೆಲುಗು ಸಿನಿ ರಂಗದಲ್ಲಿ ತಮ್ಮ ಮೆಚ್ಚಿನ ನಟ ಯಾರು?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸುತ್ತಿದ್ದ  ಮೀರಾಗೆ ಮಧ್ಯದಲ್ಲಿ ಒಂದಷ್ಟು ಜನ, ಜ್ಯೂ.ಎನ್ ಟಿಆರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಒಂದು ಪದದಲ್ಲಿ ತಿಳಿಸಿ ಎಂದು ಜ್ಯೂ. ಎನ್ ಟಿಆರ್ ಅಭಿಮಾನಿಯೊಬ್ಬರು ಕೇಳಿದ್ದರು. ಜ್ಯೂ. ಎನ್ ಟಿಆರ್ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದ ಮೀರಾ ಚೋಪ್ರಾ ಅವರು ಯಾರು ಗೊತ್ತಿಲ್ಲ. ನಾನು ಅವರ ಅಭಿಮಾನಿಯಲ್ಲ ಎಂದಿದ್ದಾರೆ. 

ಇನ್ನೂ ಕೆಲವರು ಜ್ಯೂ.ಎನ್ ಟಿಆರ್ ಅವರ ಶಕ್ತಿ (2011) ದಮ್ಮು (2012) ಸಿನಿಮಾಗಳನ್ನು ವೀಕ್ಷಿಸುವಂತೆ ಸಲಹೆ ನೀಡಿದ್ದರು. ಇದಕ್ಕೂ ಪ್ರತಿಕ್ರಿಯಿಸಿದ್ದ ಮೀರಾ ಚೋಪ್ರಾ ಧನ್ಯವಾದ ಆದರೆ ನನಗೆ ಆಸಕ್ತಿ ಇಲ್ಲ ಎಂದು ಹೇಳಿದ್ದರು. ಇದರಿಂದ ಕೆರಳಿದ ಜ್ಯೂ.ಎನ್ ಟಿಆರ್ ಅಭಿಮಾನಿಗಳು, ಮೀರಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. 

ಮೀರಾ ಚೋಪ್ರಾ ಈ ಘಟನೆಯನ್ನು ಜ್ಯೂ.ಎನ್ ಟಿಆರ್ ಅವರ ಖಾತೆಗೆ ಟ್ಯಾಗ್ ಮಾಡಿ, "ಈ ರೀತಿಯ ಅಭಿಮಾನಿಗಳಿಂದ ಯಶಸ್ವಿಯಾಗಿದ್ದೀರಿ ಅನಿಸುತ್ತಾ"? ಎಂದು ಪ್ರಶ್ನಿಸಿದ್ದಾರೆ. ಮೀರಾ ಚೋಪ್ರಾಗೆ ಗಾಯಕಿ ಚಿನ್ಮಯಿ ಶ್ರೀಪಾದ್ ಸಹ ಬೆಂಬಲ ನೀಡಿದ್ದಾರೆ. ಜ್ಯೂ.ಎನ್ ಟಿಆರ್ ಅಭಿಮಾನಿಗಳ ವಿರುದ್ಧ ಮೀರಾ ಚೋಪ್ರಾ ಸೈಬರ್ ಬೆದರಿಕೆ ದೂರು ದಾಖಲಿಸಿದ್ದಾರೆ.

ಬೆದರಿಕೆ, ಕಿರುಕುಳ ಘಟನೆಯನ್ನು ವಿರೋಧಿಸಿ ಟ್ವಿಟರ್ ನಲ್ಲಿ  #WeSupportMeeraChopra ಅಭಿಯಾನ ಪ್ರಾರಂಭವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT