ಸಿನಿಮಾ ಸುದ್ದಿ

ನಟ ದರ್ಶನ್ ಅಚ್ಚುಮೆಚ್ಚಿನ ಕಾಳಮ್ಮನ ಕೊಪ್ಪಲು ಗ್ರಾಮದ ಬಸವ ಇನ್ನಿಲ್ಲ

Raghavendra Adiga

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಚ್ಚುಮೆಚ್ಚಿನ ಕಾಳಮ್ಮನ ಕೊಪ್ಪಲು ಗ್ರಾಮದ ಬಸವ ಇಹಲೋಕ ಯಾತ್ರೆ ಮುಗಿಸಿದೆ. ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಬಸವ ಶುಕ್ರವಾರ ನಸುಕಿನ ಜಾವ ಸಾವನ್ನಪ್ಪಿದೆ. 

ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕಾಗಿ ನಟ ದರ್ಶನ್ ತೆರಳಿದ್ದ ವೇಳೆ ಕೆ.ಆರ್. ನಗರದ ಕಾಳಮ್ಮನ ಕೊಪ್ಪಲು ಗ್ರಾಮದ ಈ ಬಸವ ರಸ್ತೆಗೆ ಅಡ್ಡ ನಿಂತು ಯಾರೂ ಮುಂದೆ ಸಾಗದಂತೆ ತಡೆದಿದ್ತ್ತು. ಆಗ ದರ್ಶನ ವಾಹನದಿಂದಿಳಿದು ಅದರ ಮೈದಡವಿದ್ದರು. ಅದೇ ತಕ್ಷಣ ಆ ಬಸವ ದಾರಿ ಬಿಟ್ಟಿತ್ತು. ದರ್ಶನ್ ಅವರ ಬಸವನೊಂದಿಗಿನ ಒಡನಾಟದ ಈ ವೀಡಿಯೋ ಸಾಮಾಜಿಕ ತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. 

ಆದರೆ ಕಳೆದ ಕೆಲ ದಿನಗಳ ಹಿಂದೆ ಹುಲ್ಲು, ನೀರನ್ನು ಮುಟ್ಟದೆ ದೇವಸ್ಥಾನ ಆವರಣದಲ್ಲಿ ಮಲಗಿದ್ದ ಬಸವ ಅನಾರೋಗ್ಯಕ್ಕೀಡಾಗಿತ್ತು.ಈ ವಿಚಾರ ತಿಳಿದ ದರ್ಶನ್ ಬಸವನ ಚಿಕಿತ್ಸೆಗಾಗಿ ಮೈಸೂರು ಪಶುವದ್ಯರನ್ನು ಕರೆಸಿದ್ದರು.

ಲಾಕ್ ಡೌನ್ ಆಗಿರುವ ಕಾರಣ ತಾವು ಬರಲಾಗುತ್ತಿಲ್ಲ ಆದರೆ ಚಿಕಿತ್ಸೆಗೆ ಎಷ್ಟು ಖರ್ಚಾದರೂ ಪರವಾಗಿಲ್ಲ ಬಸವ ಗುಣಮುಖವಾಗಲಿ ಎನ್ನುವುದು ದರ್ಶನ್ ಆಶಯವಾಗಿತ್ತು.  ಆದರೆ ಚಿಕಿತ್ಸೆ ಫಲಿಸದ ಕಾರಣ ಕಾಳಮ್ಮನ ದೇವಸ್ಥಾನ ಆವರಣದಲ್ಲಿ ಬಸವ ಕೊನೆಯುಸಿರೆಳೆದಿದೆ,

SCROLL FOR NEXT