ಸಿನಿಮಾ ಸುದ್ದಿ

ನಟ ಚಿರಂಜೀವಿ ಸರ್ಜಾ ನಿಧನ: ಚಿತ್ರರಂಗದ ಗಣ್ಯರ ಅಶ್ರುತರ್ಪಣ

Srinivasamurthy VN

ಬೆಂಗಳೂರು: ನಟ ಜಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನದಿಂದಾಗಿ ಕನ್ನಡ ಚಿತ್ರರಂಗ ಆಘಾತ ವ್ಯಕ್ತಪಡಿಸಿದ್ದು, ನಟ ದರ್ಶನ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ವಿಧಿ ನಿಜವಾಗಿಯೂ ಕ್ರೂರ: ದರ್ಶನ್
ಇನ್ನು ಚಿರಂಜೀವಿ ಸರ್ಜಾ ನಿಧನಕ್ಕೆ ನಟ ದರ್ಶನ್ ಅವರೂ ಕೂಡ ಕಂಬನಿ ಮಿಡಿದಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಅವರು,  ಚಿರು ಅಕಾಲಿಕ ಮರಣದಿಂದ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ವಿಧಿ ನಿಜವಾಗಿಯೂ ತುಂಬಾ ಕ್ರೂರ. ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಮೇಘನಾ ಹಾಗೂ ಸರ್ಜಾ ಕುಟುಂಬದವರಿಗೆ ನೀಡಲಿ. May the soul R.I.P ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

ಚಿರು ಅಗಲಿಕೆ ನೋವು ತಂದಿದೆ
ಸ್ಯಾಂಡಲ್​ವುಡ್ ನಟ ಚಿರಂಜೀವಿ ಅಗಲಿಕೆಗೆ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರೂ ಕೂಡ​ ಸಂತಾಪ ಸೂಚಿಸಿದ್ದಾರೆ. ಟ್ವಿಟರ್​ನಲ್ಲಿ  ಸಂತಾಪ ಸೂಚಿಸಿರುವ ಅನಿಲ್ ಕುಂಬ್ಳೆ, ಚಿರಂಜೀವಿ ಸರ್ಜಾ ಅಗಲಿಕೆ ತುಂಬಾ ನೋವು ಹಾಗೂ ಆಘಾತವುಂಟು ಮಾಡಿದೆ. ಇಷ್ಟು ಬೇಗ ಒಂದು ಅದ್ಭುತ ಪ್ರತಿಭೆ ಅಗಲಿದ್ದು ತುಂಬಾ ಬೇಸರದ ವಿಷಯ, ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅನಿಲ್ ಕುಂಬ್ಳೆ ಟ್ವೀಟ್ ಮಾಡಿದ್ದಾರೆ.

SCROLL FOR NEXT