ಸಿನಿಮಾ ಸುದ್ದಿ

ಭರವಸೆಯ ಖಳನಟ ರಾಜ್ ದೀಪಕ್ ಶೆಟ್ಟಿ ಎಂಗೇಜ್ ಮೆಂಟ್, ಕೊರೋನಾ ಕಡಿಮೆಯಾಗುತ್ತಲೇ ಮದ್ವೆ!

Raghavendra Adiga

ಭರಾಟೆ, ಭರ್ಜರಿಯಂತಹಾ ಚಿತ್ರಗಳಲ್ಲಿ ಅಭಿನಯಿಸಿದ್ದ, ನಟ  ರಾಜ್ ದೀಪಕ್ ಶೆಟ್ಟಿ ಎಂಗೇಜ್ ಮೆಂಟ್ ನೆರವೇರಿದೆ. ಅವರು ತಮ್ಮ ಬಹುಕಾಲದ ಸ್ನೇಹಿತೆಯೊಂದಿಗೆ ಮಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

ಭರ್ಜರಿ, ಭರಾಟೆ, ಪಂಚತಂತ್ರ ಇನ್ನೂ ಮುಂತಾದ ಚಿತ್ರಗಳಲ್ಲಿ ನಟಿಸಿರುವ ರಾಜ್ ದೀಪಕ್ ಇವೆಂಟ್‌ ಆರ್ಗನೈಸರ್ ಆಗಿರುವ ಮಂಗಳೂರಿನ ಸೋನಿಯಾ ರಾಡ್ರಿಗಸ್ ಅವರಿಒಂದಿಗೆ ಹಸೆಮಣೆ ಏರಲು ಸಿದ್ದವಾಗಿದ್ದಾರೆ. ಈ ಇಬ್ಬರೂ ಬಹುಕಾಲದಿಂದ ಪ್ರೀತಿಸುತ್ತಿದ್ದರು. 

ಮೇ 17ರಂದು ಈ ಜೋಡಿಯ ಮದುವೆ ನಿಶ್ಚಯವಾಗಿತಾದರೂ ಇದೀಗ ಕೊರೋನಾವೈರಸ್ ಕಾರಣದಿಂದ ಮುಂದೂಡಿಕೆಯಾಗಿದೆ. 

ರಾಜ್ ದೀಪಕ್ ಸಧ್ಯ ಕೋಟಿಗೊಬ್ಬ 3, ನಲ್ಲಿ ಅಭಿನಯಿಸುತ್ತಿದ್ದಾರೆ. ಇದಲ್ಲದೆ ಹಲವಾರು ತೆಲುಗು ಚಿತ್ರಗಳಲ್ಲಿ ಅಸಹ ಅವರು ನಟಿಸುತ್ತಿದ್ದಾರೆ.

SCROLL FOR NEXT