ಸಿನಿಮಾ ಸುದ್ದಿ

ಕೋವಿಡ್-19: ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಪವನ್ ಕಲ್ಯಾಣ್ 1 ಕೋಟಿ ದೇಣಿಗೆ! 

Nagaraja AB

ಅಮರಾವತಿ: ಕೋವಿಡ್ -19 ಪರಿಹಾರದ ಕ್ರಮವಾಗಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಜನಪ್ರಿಯ ತೆಲುಗು ನಟ  ಹಾಗೂ ಜನ ಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್  1 ಕೋಟಿ ರೂಪಾಯಿ ದೇಣಿಗೆಯನ್ನು ಇಂದು ಪ್ರಕಟಿಸಿದ್ದಾರೆ. 

ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 50 ಲಕ್ಷ ರೂಪಾಯಿಯನ್ನು ಪ್ರಕಟಿಸಿರುವುದಾಗಿ ಪಕ್ಷದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಜನಸೇನಾ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾಗಿದೆ. 

ತೆಲುಗು ದೇಶಂ ಪಾರ್ಟಿ ಅಧ್ಯಕ್ಷ ಎನ್ . ಚಂದ್ರಬಾಬು ನಾಯ್ಡು ಕೂಡಾ ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ದೇಣಿಗೆಯನ್ನು ಘೋಷಿಸಿದ್ದಾರೆ. 

ಟಾಲಿವುಡ್ ಮತ್ತೊಬ್ಬ ಜನಪ್ರಿಯ ನಟ ರಾಮಚರಣ್ ತೇಜ್ ಪ್ರಧಾನಮಂತ್ರಿ ಹಾಗೂ ಆಂಧ್ರಪ್ರದೇಶ , ತೆಲಂಗಾಣದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟಾರೇ 70 ಲಕ್ಷ ದೇಣಿ ನೀಡುವುದಾಗಿ ಘೋಷಿಸಿದ್ದಾರೆ. 

SCROLL FOR NEXT