ಪುಷ್ಕರ್ ಮಲ್ಲಿಕಾರ್ಜುನಯ್ಯ 
ಸಿನಿಮಾ ಸುದ್ದಿ

ನಟನೆಯನ್ನು ಪ್ರಾರಂಭಿಸಲು ಮಾನಸಿಕವಾಗಿ ಸಿದ್ಧನಾಗುತ್ತಿದ್ದೇನೆ: ಪುಷ್ಕರ್ ಮಲ್ಲಿಕಾರ್ಜುನಯ್ಯ

ಕನ್ನಡ ಚಿತ್ರರಂಗದ ಮಹತ್ವದ ನಿರ್ಮಾಪಕರಲ್ಲಿ ಒಬ್ಬರಾದ ಪುಷ್ಕರ್ ಮಲ್ಲಿಕಾರ್ಜುನಯ್ಯಅವರೀಗ ಅಭಿನಯದ ಬಗೆಗೆ ಸಹ ಆಸಕ್ತರಾಗುತ್ತಿದ್ದಾರೆ. ಸಧ್ಯ ವರು ತಮ್ಮೂರಾದ ತುಮಕೂರಿನಲ್ಲಿ ನೆಲೆಸಿದ್ದು ಮುಂದಿನ ಚಿತ್ರಕ್ಕಾಗಿ ಸಿದ್ದತೆ ನಡೆಸಿದ್ದಾರೆ. ಅವರ ಚಿತ್ರಕ್ಕೆ  ನಿರ್ದೇಶಕ ಸುನಿ ಆಕ್ಷನ್ ಕಟ್ ಹೇಳಲಿದ್ದಾರೆ.

ಕನ್ನಡ ಚಿತ್ರರಂಗದ ಮಹತ್ವದ ನಿರ್ಮಾಪಕರಲ್ಲಿ ಒಬ್ಬರಾದ ಪುಷ್ಕರ್ ಮಲ್ಲಿಕಾರ್ಜುನಯ್ಯಅವರೀಗ ಅಭಿನಯದ ಬಗೆಗೆ ಸಹ ಆಸಕ್ತರಾಗುತ್ತಿದ್ದಾರೆ. ಸಧ್ಯ ವರು ತಮ್ಮೂರಾದ ತುಮಕೂರಿನಲ್ಲಿ ನೆಲೆಸಿದ್ದು ಮುಂದಿನ ಚಿತ್ರಕ್ಕಾಗಿ ಸಿದ್ದತೆ ನಡೆಸಿದ್ದಾರೆ. ಅವರ ಚಿತ್ರಕ್ಕೆ  ನಿರ್ದೇಶಕ ಸುನಿ ಆಕ್ಷನ್ ಕಟ್ ಹೇಳಲಿದ್ದಾರೆ.

“ಇದು ಕಮರ್ಷಿಯಲ್ ಎಂಟರ್ಟೈನರ್ ಆಗಿರಲಿದೆ.  ಈ ವರ್ಷ ಆಗಸ್ಟ್‌ನಲ್ಲಿ ಈ ಯೋಜನೆಯು ಸೆಟ್ಟೇರುವ ಸಾಧ್ಯತೆ ಇದೆ. ”ಎಂದು ಪುಷ್ಕರ್ ಹೇಳುತ್ತಾರೆ,“ ಅದೃಷ್ಟವೋ ದುರದೃಷ್ಟವೋ ನಮಗೀಗ ಸಾಕಷ್ಟು ಸಮಯ ದೊರಕಿದೆ.  ನಾನು ಅದನ್ನು ಸ್ಕ್ರಿಪ್ಟ್ ಬರೆಯಲು ಬಳಸಿಕೊಳ್ಳುತ್ತಿದ್ದೇನೆ ”ಎಂದು ಹೇಳುತ್ತಾರೆ. ನಿರ್ಮಾಪಕ ಈ ಹಿಂದೆ ಸೈಂಟಿಫಿಕ್ ನಾವೆಲ್ ಒಡನೆ ತನ್ನ ನಟನೆಯನ್ನು ಪ್ರಾರಂಭಿಸಿದ್ದಾನೆ. “ನಿರ್ದೇಶಕ ಸುನಿ ಮತ್ತು ನಾನು  ಹೊದ ವಿಒಚಾರಗಳೊಡನೆ ಬರುತ್ತಿದ್ದೇವೆ. ಹಲವು ಸುತ್ತಿನ ಚರ್ಚೆ ಬಳಿಕ ಅಂತಿಮ ನಿರ್ಧಾರಕ್ಕೆ ಬರುತ್ತೇವೆ"

ಪುಷ್ಕರ್ ಅವರ ಪ್ರಕಾರ, ಅವರು ಕಳೆದ ಮೂರು ವರ್ಷಗಳಿಂದ ಅವರು ಅಭಿನಯದ ಕಡೆ ಗಮನಿಸುತ್ತಿದ್ದರು. ಆದರೆ ಅವರ ಪ್ರೊಡಕ್ಷನ್ ಜವಾಬ್ದಾರಿಗಳು ಅವರನ್ನು ಕಾರ್ಯನಿರತವಾಗಿಸಿವೆ ಮತ್ತು ಅವರ ಹೊಸ ಕ್ಷೇತ್ರಕ್ಕೆ ಗಮನ ಹರಿಸಲಾಗಲಿಲ್ಲ. “ನಾನು ಈ ವರ್ಷ ನಟನೆಯನ್ನು ಪೂರ್ಣಾವಧಿಯ ವೃತ್ತಿಜೀವನವನ್ನಾಗಿ ಮಾಡಲು ಮಾನಸಿಕವಾಗಿ ತಯಾರಾಗುತ್ತಿದ್ದೇನೆ. ಸ್ಕ್ರಿಪ್ಟಿಂಗ್‌ಗೆ ಸಂಬಂಧಿಸಿದಂತೆ ನಾನು ಗಮನಿಸಿದ್ದೇನೆ"

"ನನ್ನ ಚೊಚ್ಚಲ ನಿರ್ಮಾಣದ ಸಮಯದಲ್ಲಿ ಬರವಣಿಗೆಯ ಆಲೋಚನೆ ನನಗೆ ಬಂದಿತು. ಸೃಜನಶೀಲಕಥೆಯೊಂದನ್ನು  ನಾನು ಹೆಚ್ಚು ಆನಂದಿಸುತ್ತೇನೆ ಎಂದು ನಾನು ಅರಿತುಕೊಂಡಾಗ ಅದು. ಈ ಲಾಕ್‌ಡೌನ್ ನನ್ನ ಪ್ರಯೋಜನಕ್ಕೆ ಬಂದಿದೆನಾನು ಪೆನ್ ಮತ್ತು ಕಾಗದದೊಂದಿಗೆ ಸಮಯ ಕಳೆಯುವುದನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದೇನೆ, ”ಎಂದು ಅವರು ಹೇಳುತ್ತಾರೆ. ಭೀಮಸೇನ ನಳಮಹಾರಾಜ , ಅವತಾರ ಪುರುಷ, ಸೇರಿದಂತೆ ಹಲವಾರು ಯೋಜನೆಗಳಲ್ಲಿ ಪುಷ್ಕರ್ ಏಕಕಾಲದಲ್ಲಿ ನಿರತರಾಗಿದ್ದಾರೆ. ಕಿರಣ್‌ರಾಜ್ ನಿರ್ದೇಶನದ ರಕ್ಷಿತ್ ಶೆಟ್ಟಿಯ 777 ಚಾರ್ಲಿಯನ್ನು ಪುಷ್ಕರ್  ತಯಾರಿಸುತ್ತಿದ್ದಾರೆ.. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್ ವಿಜಯ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

450 ಕೋಟಿ ರೂ. ಮೌಲ್ಯದ ಧರ್ಮೇಂದ್ರ ಆಸ್ತಿ ಯಾರ ಪಾಲಾಗುತ್ತೆ? ಕುತೂಹಲ ಕೆರಳಿಸಿದ ಹೇಮಾ ಮಾಲಿನಿ ಪೋಸ್ಟ್!

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

SCROLL FOR NEXT