ಸಿನಿಮಾ ಸುದ್ದಿ

'ಮದಗಜ' ಸೆಟ್ ಗೆ 'ಡಿ ಬಾಸ್' ದರ್ಶನ್ ಎಂಟ್ರಿ, 'ಸಖತ್ ಟೈಂ' ಎಂದ ಶ್ರೀಮುರಳಿ

Raghavendra Adiga

ಮಹೇಶ್ ನಿರ್ದೇಶನದ ಶ್ರೀಮುರಳಿ ಅಭಿನಯದ "ಮದಗಜ" ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ನಡೆದಿದೆ. ಈ ವೇಳೆ ಯಾರೊಬ್ಬರಿಗೂ ಸುಳಿವು ನೀಡದೆ ಡಿ ಬಾಸ್ ದರ್ಶನ್ "ಮದಗಜ" ಶೂಟಿಂಗ್ ಸೆಟ್ ಗೆ ಎಂಟ್ರಿಯಾಗಿದ್ದಾರೆ.

ಈ ಸಮಯ ಚಿತ್ರತಂಡದ ಸದಸ್ಯರು ದರ್ಶನ್ ಜತೆ ಫೋಟೋ ತೆಗೆಸಿಕೊಂಡು ಖುಷಿ ಪಟ್ಟಿದ್ದಾರೆ.

ಇನ್ನು ನಟ ಶ್ರೀಮುರಳಿ ಸಹ ದರ್ಶನ್ ಆಗಮನವನ್ನು ಸಂಭ್ರಮಿಸಿದ್ದು ಈ ಬಗ್ಗೆ ತಮ್ಮ ಟ್ವಿಟ್ತರ್ ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.ಇದು  'ಸಖತ್ ಟೈಂ' ಎಂದು ನಟ ಶ್ರೀಮುರಳಿ ಟ್ವೀಟ್ ಮಾಡಿದ್ದಾರೆ. 

"ಮದಗಜ"ದಲ್ಲಿ ಶ್ರೀಮುರಳೀಗೆ ಆಶಿಕಾ ರಂಗನಾಥ್ ನಾಯಕಿಯಾಗಿದ್ದು ದರ್ಶನ್ ಅವರ "ರಾಬರ್ಟ್" ಚಿತ್ರ ನಿರ್ಮಾಪಕ ಉಮಾಪತಿ ಡ್ರೀನಿವಾಸ್ ಗೌಡ ಈ ಚಿತ್ರಕ್ಕೆ ಸಹ ಬಂಡವಾಳ ತೊಡಗಿಸಿದ್ದಾರೆ.

SCROLL FOR NEXT