ಲೋಹಿತ್ ಎಚ್ 
ಸಿನಿಮಾ ಸುದ್ದಿ

ಲೋಹಿತ್ ಹೆಚ್ ನಿರ್ದೇಶನದ ಹಾರರ್ ಚಿತ್ರದಲ್ಲಿ 'ದಿಯಾ' ನಾಯಕ ಪ್ರಥ್ವಿ!

"ದಿಯಾ" ಚಿತ್ರದ ನಾಯಕ ಪೃಥ್ವಿ ಅಂಬರ್ ಗೆ 2020 ದಯೆ ತೋರಿದೆ. ಕೆ.ಎಸ್.ಅಶೋಕ ನಿರ್ದೇಶನದಲ್ಲಿ ಆದಿ ಪಾತ್ರದ ಮೂಲಕ ಹೆಸರಾದ ಈ ನಟನಿಗೆ ಲಾಕ್ ಡೌನ್ ಬಳಿಕ ಒಂದಾದ ಮೇಲೆ ಒಂದರಂತೆ ಚಿತ್ರಗಳ ಆಫರ್ಸಿಕ್ಕುತ್ತಿದೆ.

"ದಿಯಾ" ಚಿತ್ರದ ನಾಯಕ ಪೃಥ್ವಿ ಅಂಬರ್ ಗೆ 2020 ದಯೆ ತೋರಿದೆ. ಕೆ.ಎಸ್.ಅಶೋಕ ನಿರ್ದೇಶನದಲ್ಲಿ ಆದಿ ಪಾತ್ರದ ಮೂಲಕ ಹೆಸರಾದ ಈ ನಟನಿಗೆ ಲಾಕ್ ಡೌನ್ ಬಳಿಕ ಒಂದಾದ ಮೇಲೆ ಒಂದರಂತೆ ಚಿತ್ರಗಳ ಆಫರ್ ಸಿಕ್ಕುತ್ತಿದೆ.  ಪ್ರಸ್ತುತ ಲೈಫ್ ಈಸ್ ಬ್ಯೂಟಿಫುಲ್ ಮತ್ತು ಶುಗರ್ಲೆಸ್ ಎಂಬ ಎರಡು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಇದೀಗ ಲೋಹಿತ್ ಹೆಚ್ ಅವರ ಮುಂದಿನ ಹಾರರ್ ಚಿತ್ರದ ಭಾಗವಾಗಲು ಯೋಜಿಸಿದ್ದಾರೆ. 

ಈ ಬಗ್ಗೆ ದೄಢೀಕರಿಸಿದ ಪ್ರಥ್ವಿ  ನವೆಂಬರ್ ಮಧ್ಯಭಾಗದಲ್ಲಿ ಶೂಟಿಂಗ್ ಪ್ರಾರಂಭಿಸುವುದಾಗಿ ಹೇಳಿದ್ದಾರೆ. . ಸಿಲ್ವರ್ ಟ್ರೈನ್ ಇಂಟರ್‌ನ್ಯಾಷನಲ್‌ನ ಸಹಯೋಗದೊಂದಿಗೆ ಲೋಹಿತ್ ಅವರ ಮೊದಲ ಪ್ರೊಡಕ್ಷನ್ ಇಂಡಸ್ಟ್ರಿಯಲ್ಲಿ ಮೂಡಿ ಬಂದ ಲೈಫ್ ಈಸ್ ಬ್ಯೂಟಿಫುಲ್‌ ನಲ್ಲಿ ಈ ನಟ ಅಭಿನಯಿಸಿದ್ದಾರೆ.

ಮಮ್ಮಿ ಸೇವ್ ಮಿ ಮತ್ತು ದೇವಕಿ ಖ್ಯಾತಿಯ ನಿರ್ದೇಶಕ ಈ ಚಿತ್ರಕ್ಕಾಗಿ ಪೃಥ್ವಿ ಅವರನ್ನು ಆಯ್ಕೆ ಮಾಡಿದ್ದಾರೆ. . "ಲೋಹಿತ್ ಒಬ್ಬ ಉತ್ಸಾಹಿ ನಿರ್ದೇಶಕ, ಮತ್ತು ನಾನು ಅವರ ನಿರ್ದೇಶನದ ಯೋಜನೆಯ ಬಗ್ಗೆ ಚರ್ಚಿಸುತ್ತಿದ್ದೇವೆ. ಆದಾಗ್ಯೂ, ಅವರ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ನಿರ್ಮಿಸಲಾದ ಲೈಫ್ ಈಸ್ ಬ್ಯೂಟಿಫುಲ್  ಗಾಗಿ ನನ್ನನ್ನು ಸಂಪರ್ಕಿಸಲು ಅದಕ್ಕಾಗಿ ಮೊದಲು ಶೂಟಿಂಗ್ ನಡೆಸಲು ತಯಾರಾಗಿದ್ದೆ

"ನಾನು ಪ್ರಸ್ತುತ ಕೆ.ಎಂ.ಶಶಿಧರ್ ನಿರ್ದೇಶನದ  ಶುಗರ್ಲೆಸ್ ಚಿತ್ರದ ಶೂಟಿಂಗ್ ನಲ್ಲಿದ್ದು ಇದಾದ ನಂತರ ಲೋಹಿತ್ ಚಿತ್ರದ ಚಿತ್ರೀಕರಣ ಪ್ರಾರಂಭಿಸುತ್ತೇನೆ."

ಲೋಹಿತ್ ತಮ್ಮ ಹಿಂದಿನ ಎರಡು ಚಿತ್ರಗಳಲ್ಲಿ ಹಾರರ್ ಅಂಶಗಳನ್ನು ತೋರಿಸಿದ್ದರೂ ಪ್ರಥ್ವಿ ಅವರ ಪಾಲಿಗೆ ಇದು ಹೊಸ ಬಗೆಯ ಪಾತ್ರವಾಗಿರಲಿದೆ. ಇದೀಗ ನಟ ಅಕ್ಟೋಬರ್ 23 ರಂದು ಚಿತ್ರಮಂದಿರಗಳಲ್ಲಿ ದಿಯಾ ಮರು ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

ಈ ನಡುವೆ ಪ್ರಥ್ವಿ ದರ್ಶನ್ ಅಪೂರ್ವಾ ನಿರ್ದೇಶನದ ಚಿತ್ರವೊಂದರಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೆಸರಿಡಲಾಗಿರುವ ಈ ಚಿತ್ರವು ದಿಯಾ  ನಾಯಕಿ ಖುಷಿ ರವಿ ಮತ್ತು ಪೃಥ್ವಿ ಅವರನ್ನು ಮತ್ತೆ ಬೆಳ್ಳಿ ಪರದೆಯ ಮೇಲೆ ಒಂದಾಗಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT