ಸಂಜನಾ 
ಸಿನಿಮಾ ಸುದ್ದಿ

ದೊಡ್ಡ ರಾಜಕಾರಣಿಗಳ ಸಖ್ಯವಿರುವುದಾಗಿ ಹೇಳಿ ದಾಳಿ ವೇಳೆ ಸಂಜನಾರಿಂದ ಸಿಸಿಬಿ ಪೊಲೀಸರಿಗೆ ಬೆದರಿಕೆ

ಮಂಗಳವಾರ ಬೆಳಗ್ಗೆ ಸಿಸಿಬಿ ಪೊಲೀಸರ ತಂಡ ನಟಿ ಸಂಜನಾ ಮನೆಯನ್ನು ರೇಡ್ ಮಾಡುವ ವೇಳೆ ಆಕೆ  ಪೊಲೀಸರ ಬಳಿ ಕೆಲವು ದೊಡ್ಡ ರಾಜಕಾರಣಿಗಳ ಹೆಸರು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಅವರನ್ನು  5 ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ತೆಗೆದುಕೊಳ್ಳುವಂತೆ ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ  ಆದೇಶ ನೀಡಿದೆ.

ಮಂಗಳವಾರ ಬೆಳಗ್ಗೆ ಸಿಸಿಬಿ ಪೊಲೀಸರ ತಂಡ ನಟಿ ಸಂಜನಾ ಮನೆಯನ್ನು ರೇಡ್ ಮಾಡುವ ವೇಳೆ ಆಕೆ  ಪೊಲೀಸರ ಬಳಿ ಕೆಲವು ದೊಡ್ಡ ರಾಜಕಾರಣಿಗಳ ಹೆಸರು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಸಂಜನಾರ ಇಂದಿರಾನಗರದ ಮನೆಗೆ ತೆರಳಿದ ಸಿಸಿಬಿ ಪೊಲೀಸರ ಮುಂದೆ ಏಕೆ ಬಂದಿದ್ದೀರಿ, ನಾನು ತಪ್ಪು ಮಾಡಿಲ್ಲ ಎಂದು ರಂಪಾಟ ಮಾಡಿದ್ದಾರೆ, ನಂತರ ಸೆರ್ಚ್ ವಾರೆಂಟ್ ತೋರಿಸಿದ ಮೇಲೆ ಮನೆಯನ್ನು ಶೋಧ ಮಾಡಲು ಸಂಜನಾ ಅವಕಾಶ ನೀಡಿದ್ದಾರೆ..

ನನ್ನನ್ನು ಈ ಕೇಸ್ ನಲ್ಲಿ ಟಾರ್ಗೆಟ್ ಮಾಡಲಾಗಿದೆ, ನನಗೆ ಬಹಳ ರಾಜಕಾರಣಿಗಳು ಗೊತ್ತು,  ಅವರ ಜೊತೆ ನನಗೆ ತುಂಬಾ ಆಪ್ತತೆಯಿದೆ ಎಂದು ಹೇಳಿಕೊಳ್ಳುವ ಮೂಲಕ ನಮಗೆ ಬೆದರಿಕೆ ಹಾಕಲು ಪ್ರಯತ್ನಿಸಿದರು, ಆದರೆ ಅದ್ಯಾವುದಕ್ಕೂ ಕೇರ್ ಮಾಡದೇ ನಾವು ನಮ್ಮ ಕರ್ತವ್ಯ ನಿರ್ವಹಿಸಿದೆವು ಎಂದು ಮೂಲಗಳು ತಿಳಿಸಿವೆ.

ನಾವು ಆಕೆಯ ಮನೆಯನ್ನು ಶೋಧ ಮಾಡುವಾಗ ಸಂಜನಾ ತಮ್ಮ ವಕೀಲರನ್ನು ಸಂಪರ್ಕಿಸಿದರು, ನಮ್ಮ ಕೆಲಸ ಮುಗಿದ ಮೇಲೆ ಆಕೆಯನ್ನು ನಾವು ಸಿಸಿಬಿ ಮುಖ್ಯ ಕಚೇರಿಗೆ ಕರೆದುಕೊಂಡು ಹೋದೆವು ಎಂದು ಅಲ್ಲಿ ಹಿರಿಯ ಅಧಿಕಾರಿಗಳು ಅವರ ವಿಚಾರಣೆ ನಡೆಸಿದರು.

ಡ್ರಗ್ಸ್ ದಂಧೆಯಲ್ಲಿ ನನ್ನ ಪಾತ್ರವಿಲ್ಲ, ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಆತ್ಮ ವಿಶ್ವಾಸದಿಂದ ಹೇಳಿಕೊಳ್ಳುತ್ತಿದ್ದ ಸಂಜನಾ ಅಧಿಕಾರಿಗಳು ಸಾಕ್ಷಿ ತೋರಿದ ಮೇಲೆ ತೆಪ್ಪಗಾದರು ಎಂದು ಮೂಲಗಳು ತಿಳಿಸಿವೆ,  ವಿಚಾರಣೆ ವೇಳೆ ಆಕೆ ಕೆಲವರ ಹೆಸರನ್ನು ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ, ನಂತರ ಆಕೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ರವಾನಿಸಲಾಗಿದೆ, ನಟಿ ರಾಗಿಣಿ ಕೂಡ ಅಲ್ಲಿಯೇ ಇದ್ದಾರೆ, ಹೀಗಾಗಿ ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುವುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT