ಸಿನಿಮಾ ಸುದ್ದಿ

ಎಸ್ ಪಿಬಿ ನಿಧನಕ್ಕೆ ಕಂಬನಿ ಮಿಡಿದ ಚಿತ್ರರಂಗ

Srinivasamurthy VN

ಬೆಂಗಳೂರು: ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಎಸ್ ಪಿ ಬಾಲ ಸುಬ್ರಮಣ್ಯಂ ಅವರ ನಿಧನಕ್ಕೆ ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಸಿನಿರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಖ್ಯಾತ ನಟಿ ರಾಧಿಕಾ ಶರತ್ ಕುಮಾರ್ ಅವರು, ದೈಹಿಕವಾಗಿ ಬಾಲು ನಮ್ಮನ್ನು ಅಗಲಿದ್ದರೂ ತಮ್ಮ ಕಂಠದ ಮೂಲಕ ಶಾಶ್ವತವಾಗಿ ಉಳಿದಿದ್ದಾರೆ. ಸಮಾಜಕ್ಕೆ ತಮ್ಮ ಧನಿಯಿಂದಲೇ ಸೇವೆ ಸಲ್ಲಿಸಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಉಳಿದಂತೆ ಬಾಲಿವುಡ್ ನಟ ರಿತೇಶ್ ದೇಶ್ ಮುಖ್, ಖ್ಯಾತ ನಿರ್ದೇಶಕ ರಮೇಶ್ ಬಾಲಾ, ಖ್ಯಾತ ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್, ಎಸ್ ತಮನ್, ತೆಲುಗು ಸಿನಿರಂಗದ ಖ್ಯಾತ ನಿರ್ಮಾಪಕ, ಹಾಸ್ಯನಟ ಬಂಡ್ಲ ಗಣೇಶ್, ಖ್ಯಾತ ನಟಿ ಲಕ್ಷ್ಮಿ ಮಂಚು ಸೇರಿದಂತೆ ಸಿನಿರಂಗದ ಹಲವು ಖ್ಯಾತನಾಮರು ಕಂಬನಿ ಮಿಡಿದ್ದಾರೆ.

SCROLL FOR NEXT