ಉಪೇಂದ್ರ, ಹರಿಪ್ರಿಯಾ 
ಸಿನಿಮಾ ಸುದ್ದಿ

ಮುಂದಿನ ವಾರದಿಂದ ರಿಯಲ್ ಸ್ಟಾರ್ ನಟನೆಯ 'ಲಗಾಮ್' ಶೂಟಿಂಗ್ ಪ್ರಾರಂಭ

ಏಪ್ರಿಲ್ 26 ರಿಂದ ಚಿತ್ರೀಕರಣ ಪ್ರಾರಂಭಕ್ಕೆ ನಿರ್ಮಾಪಕರು ಯೋಜಿಸುತ್ತಿರುವ ಕಾರಣ ಉಪೇಂದ್ರ-ಕೆ ಮಾದೇಶ್ ಜೋಡಿಯ "ಲಗಾಮ್" ನ ಮಹೂರ್ತ ಸೋಮವಾರ ನೆರವೇರಿದೆ. ಪ್ರಸ್ತುತ "ಕಬ್ಜ" ಚಿತ್ರದ ಶೂಟಿಂಗ್ ನಲ್ಲಿರುವ  ರಿಯಲ್ ಸ್ಟಾರ್ ನಿರ್ದೇಶಕ ಶಶಾಂಕ್ ಅವರ ಮುಂದಿನ ಯೋಜನೆಯ ಚಿತ್ರೀಕರಣಕ್ಕೆ ಸಿದ್ದವಾಗಿದ್ದಾರೆ. 

ಏಪ್ರಿಲ್ 26 ರಿಂದ ಚಿತ್ರೀಕರಣ ಪ್ರಾರಂಭಕ್ಕೆ ನಿರ್ಮಾಪಕರು ಯೋಜಿಸುತ್ತಿರುವ ಕಾರಣ ಉಪೇಂದ್ರ-ಕೆ ಮಾದೇಶ್ ಜೋಡಿಯ "ಲಗಾಮ್" ನ ಮಹೂರ್ತ ಸೋಮವಾರ ನೆರವೇರಿದೆ. ಪ್ರಸ್ತುತ "ಕಬ್ಜ" ಚಿತ್ರದ ಶೂಟಿಂಗ್ ನಲ್ಲಿರುವ  ರಿಯಲ್ ಸ್ಟಾರ್ ನಿರ್ದೇಶಕ ಶಶಾಂಕ್ ಅವರ ಮುಂದಿನ ಯೋಜನೆಯ ಚಿತ್ರೀಕರಣಕ್ಕೆ ಸಿದ್ದವಾಗಿದ್ದಾರೆ. 

"ಇದು ರಾಜಕೀಯ ವಿಡಂಬನೆಯಾಗಿರಲಿದೆ. ಹಣ ವರ್ಗಾವಣೆಯ ಸುತ್ತ ಕಥೆ ಸುತ್ತುವರಿಯುತ್ತದೆ " ಎಂದು ನಿರ್ದೇಶಕರು ಹೇಳುತ್ತಾರೆ, ಈ ಚಿತ್ರವನ್ನು ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಮಾಡಿ  ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ಅಭಿನಯಿಸುತ್ತಿದ್ದು, ಸಾಧು ಕೋಕಿಲಾ, ರಂಗಾಯಣ ರಘು, ಶೋಭರಾಜ್ ಸೇರಿದಂತೆ ಹಲವರು ತಂಡದಲ್ಲಿದ್ದಾರೆ.

"ಈ ಚಿತ್ರವು ದೊಡ್ಡ ಪಾತ್ರವರ್ಗವನ್ನು ಹೊಂದಿರಲಿದೆ.ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲು ಪ್ರಸಿದ್ಧ ಟಾಲಿವುಡ್ ನಟರಾದ ಪ್ರಭು ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಅವರನ್ನು ಸಂಪರ್ಕಿಸಲಿದ್ದೇವೆ. " ಮಾದೇಶ್ ಹೇಳಿದ್ದಾರೆ. ಚಿತ್ರವನ್ನು ಎಂ ಆರ್ ಗೌಡ ನಿರ್ಮಿಸಿದ್ದು  , ಇಡೀ ಶೂಟಿಂಗ್ ಮೈಸೂರಿನಲ್ಲಿ ನಡೆಯಲಿದೆ. "ಲಗಾಮ್"ಎಂ ಎಸ್ ರಮೇಶ್ ಬರೆದ ಸಂಭಾಷಣೆಗಳನ್ನು ಹೊಂದಿದ್ದರೆ ರಾಜೇಶ್  ಕ್ಯಾಮೆರಾ ಕೆಲಸ ನಿರ್ವಹಿಸಲಿದ್ದಾರೆ. ಚಿತ್ರಕ್ಕೆ ಸಾಧು ಕೋಕಿಲಾ ಹಿನ್ನೆಲೆ ಸಂಗೀತವಿರಲಿದೆ.

ಉಪೇಂದ್ರ ಇದಾಗಲೇ "ಹೋಂ ಮಿನಿಸ್ಟರ್", "ತ್ರಿಶೂಲ", "ಬುದ್ದಿವಂತ 2" ಸೇರಿ ಅನೇಕ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು "ಅಮೃತಮತಿ" ಚಿತ್ರಕ್ಕಾಗಿ ಬರಗೂರು ರಾಮಚಂದ್ರಪ್ಪ ಅವರೊಂದಿಗೆ ಕೆಲಸ ಮಾಡಿದ ಹರಿಪ್ರಿಯಾ, ಈ ಮಧ್ಯೆ, ಕಸ್ತೂರ್ಬಾ ಗಾಂಧಿಯವರ ಜೀವನಚರಿತ್ರೆಗಾಗಿ  ಮತ್ತೆ ಬರಗೂರು ಅವರೊಡನೆ ಜತೆಯಾಗಲಿದ್ದಾರೆ. ಇದಕ್ಕೆ "ತಾಯಿ ಕಸ್ತೂರ್ಬಾ ಗಾಂಧಿ" ಎಂದು ಹೆಸರಿಡಲಾಗಿದೆ. ಇನ್ನು . ಶಶಾಂಕ್ ಅವರ ಇನ್ನೂ ಹೆಸರಿಡದ ಚಿತ್ರಕ್ಕಾಗಿ ಹರಿಪ್ರಿಯಾ ಉಪೇಂದ್ರ ಅವರಿಗೆ ಜೋಡಿಯಾಗಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಭಯೋತ್ಪಾದನೆಯ ವಿರುದ್ಧ ಒಟ್ಟಾಗಿ ಹೋರಾಟ": ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ, ಪುಟಿನ್

ಭಾರತದ ಕಂಪನಿಗಳಿಂದ ರಫ್ತು ವಿಸ್ತರಣೆಗೆ 6 ವಲಯ ಗುರುತಿಸಿದ ರಷ್ಯಾ: 2030 ರ ವೇಳೆಗೆ $100 ಬಿಲಿಯನ್ ದ್ವಿಪಕ್ಷೀಯ ವ್ಯಾಪಾರದ ಗುರಿ!

"Role Chahiye?": ವಯಸ್ಕರ ಹೊಸ ಸಿನಿಮಾ ಮಾಡಿ, ಟ್ರೋಲ್ ಗೆ ಉರಿದು ಬಿದ್ದ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ!

ಅಕ್ಷಯ್ ಕುಮಾರ್- ಶಿಲ್ಪಾ ಶೆಟ್ಟಿ ಮದುವೆ ಮುರಿದು ಬೀಳಲು ಇದೇ ಕಾರಣ! ಅವರಿಬ್ಬರ 'ಗುಟ್ಟು ರಟ್ಟು' ಮಾಡಿದ ನಿರ್ದೇಶಕ

ಅನಾಥರಿಗೆ ಶೇ.1 ರಷ್ಟು ಮೀಸಲಾತಿ 'ಐತಿಹಾಸಿಕ'; ಇದು ನಿಜವಾದ ಸಾಮಾಜಿಕ ಪರಿವರ್ತನೆ: ಮಹಾ ಸಿಎಂ ಫಡ್ನವೀಸ್

SCROLL FOR NEXT